ಮೋದಿ ಮತ್ತೆ ಪ್ರಧಾನಿಯಾಗಲು 2 ದಿನಗಳ ಅತಿರುದ್ರ ಮಹಾಯಾಗ: ಬಿಜೆಪಿ ನಾಯಕರು ಭಾಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಹೀಗಾಗಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಶಿವಮೊಗ್ಗದಲ್ಲಿ ಮಹಾಯಾಗ ನಡೆಯುತ್ತಿದೆ.

ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ವಿನೋಬನಗರದ ಶಿವಾಲಯದಲ್ಲಿ ಅತಿರುದ್ರ ಮಹಾಯಾಗ ನಡೆಸಲಾಗುತ್ತಿದೆ. 12 ಹೋಮಕುಂಡಗಳಲ್ಲಿ ಈ ಯಾಗ ನಡೆಯುತ್ತಿರುವುದು ವಿಶೇಷ.

ನಿನ್ನೆಯಿಂದ ನಡೆಯುತ್ತಿರುವ ಮಹಾಯಾಗ ಇಂದು ಪೂರ್ಣಗೊಳ್ಳಲಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಸಂಕಲ್ಪದಿಂದ ನೂರಾರು ಋತ್ವಿಜರು ಯಾಗದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಎರಡು ದಿನಗಳ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ. ಈಶ್ವರಪ್ಪ, ಎಂಪಿ ಬಿ.ವೈ. ರಾಘವೇಂದ್ರ ಮತ್ತು ಇತರ ಬಿಜೆಪಿಯ ಹಲವು ನಾಯಕರು ಈ ಯಾಗದಲ್ಲಿ ಭಾಗಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!