ಚಿಕ್ಕೋಡಿ ಸಕ್ಕರೆ ಕಾರ್ಖಾನೆಯ 200 ಕೆ.ಎಲ್ ಪಿ.ಡಿ ಇಥೇನಾಲ್ ಸಮಾರಂಭಕ್ಕೆ ಶರದರಾವಜಿ ಪವಾರ್ ಚಾಲನೆ

ಹೊಸದಿಗಂತ ವರದಿ, ಚಿಕ್ಕೋಡಿ: 

ಚಿಕ್ಕೋಡಿ-ಚಿಕ್ಕೋಡಿ ಸಿ.ಬಿ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ 200 ಕೆ.ಎಲ್ ಪಿ.ಡಿ ಇಥೇನಾಲ್/ ಡಿಸ್ಟಿಲರಿ ಘಟದ ಅಡಿಗಲ್ಲು ಸಮಾರಂಭಕ್ಕೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಪದ್ಮವಿಭೂಷಣ ಪುರಸ್ಕೃತ ಶರದರಾವಜಿ ಪವಾರ್ ಚಾಲನೆ ನೀಡಿದರು.
ಕೆ.ಎಲ್.ಇ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಸಚಿವ ಉಮೇಶ ಕತ್ತಿ, ಸಚಿವ ಎಸ್.ಟಿ ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ನಿಗಮ ಮಂಡಳಿ ಅಧ್ಯಕ್ಷ ಡಿ.ಎಮ್ ಐಹೊಳೆ, ಶಾಸಕ ಗಣೇಶ ಹುಕ್ಕೇರಿ, ಶಾಸಕ ಅನಿಲ ಬೆನಕೆ, ಬಿ.ಎಚ್ ಕೃಷ್ಣರೆಡ್ಡಿ, ಮಾಜಿ ವಿಧಾನಪರಿಷತ್ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಜಗದೀಶ ಕವಟಗಿಮಠ , ಚಂದ್ರಕಾಂತ ಕೊಠಿವಾಲೆ, ಅಮರ ಪಾಟೀಲ, ಎನ್.ಸಿ.ಪಿ ನಾಯಕ ಆರ್. ಹರಿ, ರಾಜು ಕಾಗೆ, ಜಗದೀಶ ಪಾಟೀಲ, ಗಣಪತರಾವ ಪಾಟೀಲ ಸೇರಿ ಗಣ್ಯರು ಸಾಥ್ ನೀಡಿದರು. ಸಿ.ಬಿ ಕೋರೆ ಕಾರ್ಖಾನೆ ಅದ್ಯಕ್ಷರಾದ ಭರತ ಬಣವನೆ ಸ್ವಾಗತಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!