2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಇಲ್ಲಿದೆ ಸಾಧಕರ ಮಾಹಿತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

2022-23ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಟ್ಟು 67ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ನವೆಂಬರ್‌ 1 ರಂದುರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜೊತೆಗೆ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಸಂಘ-ಸಂಸ್ಥೆಗಳನ್ನೂ ಸರ್ಕಾರ ಗುರುತಿಸಿದೆ.

ಈ ಬಾರಿ ಪದ್ಮ ಪ್ರಶಸ್ತಿ ಮಾದರಿಯಲ್ಲಿರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಮಾಡಲಾಗಿದ್ದು, ಸಾಮಾನ್ಯರಾಗಿದ್ದುಕೊಂಡು ಅಸಾಮಾನ್ಯ ಕೆಲಸ ಮಾಡಿದವರು, ಸಮಾಜದ ನಾನಾ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದವರು, ತೆರೆಮರೆಯಲ್ಲಿದ್ದ ಅರ್ಹ ಸಾಧಕರು, ಸಮಾಜದ ಹಿತಕ್ಕಾಗಿ ಗಣನೀಯ ಸೇವೆ ಸಲ್ಲಿಸಿದ ಹತ್ತು ಸಂಘ-ಸಂಸ್ಥೆಗಳನ್ನು ಸರಕಾರ ಗುರುತಿಸಿದೆ.

2022-23ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 67 ಜನರ ಪಟ್ಟಿ ಈ ಕೆಳಗಿನಂತಿದೆ ನೋಡಿ.

ಚಲನಚಿತ್ರ ಕ್ಷೇತ್ರ
ದತ್ತಣ್ಣ -ಚಿತ್ರದುರ್ಗ
ಅವಿನಾಶ್‌-ಬೆಂಗಳೂರು

ಕಿರುತೆರೆ
ಸಿಹಿಕಹಿ ಚಂದ್ರು – ಬೆಂಗಳೂರು

ಸಂಕೀರ್ಣ ಕ್ಷೇತ್ರ
ಸುಬ್ಬರಾಮ ಶೆಟ್ಟಿ, ಆರ್‌ವಿ ಸಂಸ್ಥೆಗಳು, – ಬೆಂಗಳೂರು
ವಿದ್ವಾನ್‌ ಗೋಪಾಲಕೃಷ್ಣ ಶರ್ಮಾ- ಬೆಂಗಳೂರು
ಸೋಲಿಗರ ಮಾದಮ್ಮ- ಚಾಮರಾಜನಗರ

ಸೈನಿಕ ಕ್ಷೇತ್ರ
ಸುಬೇದಾರ್‌ ಬಿ.ಕೆ.ಕುಮಾರಸ್ವಾಮಿ- ಬೆಂಗಳೂರು

ಪತ್ರಿಕೋದ್ಯಮ
ಹೆಚ್‌.ಆರ್‌.ಶ್ರೀಶಾ- ಬೆಂಗಳೂರು
ಜಿ.ಎಂ.ಶಿರಹಟ್ಟಿ- ಗದಗ

ವಿಜ್ಞಾನ ಮತ್ತು ತಂತ್ರಜ್ಞಾನ
ಕೆ.ಶಿವನ್‌- ಬೆಂಗಳೂರು
ಡಿ.ಆರ್‌.ಬಳೂರಗಿ- ರಾಯಚೂರು

ಕೃಷಿ
ಗಣೇಶ್ ತಿಮ್ಮಯ್ಯ- ಕೊಡಗು
ಚಂದ್ರಶೇಖರ್ ನಾರಾಯಣಪುರ- ಚಿಕ್ಕಮಗಳೂರು

ಪರಿಸರ
ಸಾಲುಮರದ ನಿಂಗಣ್ಣ- ರಾಮನಗರ

ಪೌರಕಾರ್ಮಿಕ ಕ್ಷೇತ್ರ
ಮಲ್ಲಮ್ಮ ಹೂವಿನಹಡಗಲಿ- ವಿಜಯನಗರ

ಆಡಳಿತ
ಎಲ್‌.ಹೆಚ್‌.ಮಂಜುನಾಥ್‌- ಶಿವಮೊಗ್ಗ
ಮದನ್ ಗೋಪಾಲ್‌- ಬೇಂಗಳೂರು

ಹೊರನಾಡು
ದೇವಿದಾಸ ಶೆಟ್ಟಿ- ಮುಂಬಯಿ
ಅರವಿಂದ್ ಪಾಟೀಲ್‌- ಹೊರನಾಡು
ಕೃಷ್ಣಮೂರ್ತಿ ಮಾಂಜಾ- ತೆಲಂಗಾಣ

ಹೊರದೇಶ
ರಾಜ್‌ಕುಮಾರ್‌- ಗಲ್ಫ್‌

ವೈದ್ಯಕೀಯ
ಡಾ.ಹೆಚ್‌.ಎಸ್‌.ಮೋಹನ್‌- ಶಿವಮೊಗ್ಗ
ಡಾ.ಬಸವಂತಪ್ಪ- ದಾವಣಗೆರೆ

ಸಂಗೀತ
ನಾರಾಯಣ.ಎಂ- ದಕ್ಷಿಣ ಕನ್ನಡ
ಅನಂತಚಾರ್ಯ ಬಾಳಾಚಾರ್ಯ- ಧಾರವಾಡ
ಅಂಜಿನಪ್ಪ ಸತ್ಪಾಡಿ- ಚಿಕ್ಕಬಳ್ಳಾಪುರ
ಅನಂತ ಕುಲಕರ್ಣಿ- ಬಾಗಕೋಟೆ

ಜಾನಪದ
ಸಹಮದೇವಪ್ಪ ಈರಪ್ಪ ನಡಿಗೇರ್‌- ಉತ್ತರ ಕನ್ನಡ
ಗುಡ್ಡ ಪಾಣಾರ- ಉಡುಪಿ
ಕಮಲಮ್ಮ ಸೂಲಗಿತ್ತಿ- ರಾಯಚೂರು
ಸಾವಿತ್ರಿ ಪೂಜಾರ್‌-ಧಾರವಾಡ
ರಾಚಯ್ಯ ಸಾಲಿಮಠ- ಬಾಗಕೋಟೆ
ಮಹೇಶ್ವರ್ ಗೌಡ- ಹಾವೇರಿ

ಯಕ್ಷಗಾನ
ಶ್ರೀ ಎಂ.ನ.ನಾಯಕ್ -ಉಡುಪಿ
ಶ್ರೀ ಸುಬ್ರಹ್ಮಣ್ಯ ಧಾರೇಶ-ಉತ್ತರ ಕನ್ನಡ
ಶ್ರೀ ಸರಪಾಡಿ ಅಶೋಕ್ ಶೆಟ್ಟಿ -ದಕ್ಷಿಣ ಕನ್ನಡ

ಬಯಲಾಟ
ಶ್ರೀ ಅಡವಯ್ಯ ಚ ಹಿರೇಮಠ್ ( ದೊಡ್ಡಾಟ) ಧಾರವಾಡ
ಶ್ರೀ ಶಂಕರಪ್ಪ ಮಲ್ಲಪ್ಪ ಹೊರಪೇಟೆ ಕೊಪ್ಪಳ
ಶ್ರೀ ಹೆಚ್ ಪಾಂಡುರಂಗಪ್ಪ ತಂದೆ ಹೆಚ್.ಮೀನಾಕ್ಷಪ್ಪ ಬಳ್ಳಾರಿ

ಸಾಹಿತ್ಯ
ಶ್ರೀ ಶಂಕರ ಚಚಡಿ -ಬೆಳಗಾವಿ
ಪ್ರೊ.ಕೃಷ್ಣೇಗೌಡ -ಮೈಸೂರು
ಶ್ರೀ ಅಶೋಕ್ ಬಾಬು ನೀಲಗಾರ್ -ಬೆಳಗಾವಿ
ಪ್ರೊ.ಅ.ರಾ.ಮಿತ್ರ -ಹಾಸನ
ಶ್ರೀ ರಾಮಕೃಷ್ಣ ಮರಾಠೆ -ಕಲಬುರಗಿ

ಶಿಕ್ಷಣ
ಶ್ರೀ ಕೋಟಿ ರಂಗಪ್ಪ -ತುಮಕೂರು
ಡಾ.ಎಂ.ಜಿ.ನಾಗರಾಜ್ ಸಂಶೋಧಕರು- ಬೆಂಗಳೂರು

ಕ್ರೀಡೆ
ಶ್ರೀ ದತ್ತಾತ್ರೇಯ ಗೋವಿಂದ ಕುಲಕರ್ಣಿ- ಧಾರವಾಡ
ಶ್ರೀ ರಾಘವೇಂದ್ರ ಅಣ್ಣೀಕರ್ -ಬೆಳಗಾವಿ

ನ್ಯಾಯಾಂಗ
ಶ್ರೀ ವೆಂಕಚಾಚಲಪತಿ- ಬೆಂಗಳೂರು
ಶ್ರೀ ನಂಜುಂಡ ರೆಡ್ಡಿ- ಬೆಂಗಳೂರು

ನೃತ್ಯ
ಶ್ರೀ ಕಮಲಾಕ್ಷಾಚಾರ್ಯ- ದಕ್ಷಿಣ ಕನ್ನಡ

ಸಮಾಜಸೇವೆ
ಶ್ರೀ ರವಿ ಶೆಟ್ಟಿ- ದಕ್ಷಿಣ ಕನ್ನಡ
ಶ್ರೀ ಸಿ.ಕರಿಯಪ್ಪ -ಬೆಂಗಳೂರು ಗ್ರಾಮಾಂತರ
೩.ಶ್ರೀ ಎಂ.ಎಸ್.ಕೋರಿ ಶೆಟ್ಟರ್- ಹಾವೇರಿ
೪.ಶ್ರೀ ಡಿ.ಮಾದೇಗೌಡ- ಮೈಸೂರು
೫.ಶ್ರೀ ಬಲಬೀರ್ ಸಿಂಗ್ -ಬೀದರ್

ವಾಣಿಜ್ಯೋದ್ಯಮ
ಶ್ರೀ ಬಿ.ವಿ.ನಾಯ್ಡು -ಬೆಂಗಳೂರು
ಶ್ರೀ ಜಯರಾಮ ಬನಾನ್- ಉಡುಪಿ
ಶ್ರೀ ಜಿ.ಶ್ರೀನಿವಾಸ್ -ಕೋಲಾರ

ರಂಗಭೂಮಿ
ಶ್ರೀ ತಿಪ್ಪಣ್ಣ ಹೆಳವರ್ ಯಾದಗಿರಿ
ಶ್ರೀಮತಿ ಲಲಿತಾಬಾಯಿ ಚನ್ನದಾಸರ್- ವಿಜಯಪುರ
ಶ್ರೀ ಗುರುನಾಥ್ ಹೂಗಾರ್ -ಕಲಬುರಗಿ
ಶ್ರೀ ಪ್ರಭಾಕರ ಜೋಶಿ-ತಾಳಮದ್ದಳೆ-ಯಕ್ಷಗಾನ ಉಡುಪಿ
ಶ್ರೀ ಶೈಲ ಹುದ್ದಾರ್ -ಹಾವೇರಿ

ಸಂಘ ಸಂಸ್ಥೆಗಳು
೧.ಶ್ರೀ ರಾಮಕೃಷ್ಣ ಆಶ್ರಮ -ಮೈಸೂರು
೨.ಲಿಂಗಾಯುತ ಪ್ರಗತಿಶೀಲ ಸಂಸ್ತೆ -ಗದಗ
೩.ಅಗಡಿ ತೋಟ -ಹಾವೇರಿ
೪.ತಲಸೇಮಿಯಾ ಮತ್ತು ಹೀಮೋಫೀಲಿಯ ಸೊಸೈಟಿ- ಬಾಗಲಕೋಟೆ
೫.ಅಮೃತ ಶಿಶು ನಿವಾಸ ಬೆಂಗಳೂರು
೬.ಸುಮನಾ ಫೌಂಡೇಶನ್ ಬೆಂಗಳೂರು
೭.ಯುವವಾಹಿನಿ ಸಂಸ್ಥೆ- ದಕ್ಷಿಣ ಕನ್ನಡ
೮.ನೆಲೆ ಫೌಂಡೇಶನ್, ಅನಾಥ ಮಕ್ಕಳ ಪುನರ್ವಸತಿ ಕೇಂದ್ರ -ಬೆಂಗಳೂರು
೯.ನಮ್ಮನೆ ಸುಮ್ಮನೆ-ನಿರಾಶ್ರಿತ ಆಶ್ರಮ (ಮಂಗಳಮುಖಿ ಸಂಸ್ಥೆ) -ಬೆಂಗಳೂರು
೧೦.ಶ್ರೀ ಉಮಾಮಪೇಶ್ವರಿ ಹಿಂದುಳಿದ ವರ್ಗ ಅಭಿವೃದ್ದಿ ಟ್ರಸ್ಟ್ -ಮಂಡ್ಯ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!