ಹೊಸದಿಗಂತ ಡಿಜಿಟಲ್ ಡೆಸ್ಕ್
ಈ ಬಾರಿ ಮೂರು ದಿನ ಮುಂಚಿತವಾಗಿಯೇ ಕೇರಳಕ್ಕೆ ಕಾಲಿಟ್ಟಿರುವ ಮುಂಗಾರು, ಈಗ ದಕ್ಷಿಣದ ಕಡೆಗೆ ಸರಿದು ಶ್ರೀಲಂಕಾ ಮೂಲಕ ಬಂಗಾಳಕೂಲ್ಲಿ ಪ್ರವೇಶಿಸುತ್ತಿದೆ.
ಈ ನಡುವೆ ಮುಂಗಾರಿನ ಆರಂಭ ದುರ್ಬಲವಾಗಿದ್ದರೂ ಕರ್ನಾಟಕದ ಕರಾವಳಿ ಭಾಗವಾಗಿರುವ ಉಡುಪಿ, ದಕ್ಷಿಣ ಕನ್ನಡ ಭಾಗಗಳಲ್ಲಿ ಇನ್ನೆರಡು ದಿನಗಳಲ್ಲೇ ‘ಮಳೆಗಾಲ’ ಶುರುವಾಗುವ ಸೂಚನೆ ಸಿಕ್ಕಿದೆ.
ಹೇಗಿದೆ ಹವಾಮಾನ?
ಮೇ 31ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯಂತೆ ಕಾಸರಗೋಡು ಹಾಗೂ ಕರ್ನಾಟಕದ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮೋಡ ಕವಿದ ವಾತಾವರಣ, ಆಗಾಗ ಅಲ್ಲಲ್ಲಿ ಮಳೆಯ ಮುನ್ಸೂಚನೆ ಸಾಧ್ಯತೆ ಇದೆ.
ಎಲ್ಲಿಗಿದೆ? ಎಲ್ಲಿಗಿಲ್ಲ?
ಇನ್ನು ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಅಲ್ಲಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದ್ದರೆ, ಧಾರವಾಡ, ಬೆಳಗಾವಿ, ಶಿವಮೊಗ್ಗ, ಕೊಡಗು ಜಿಲ್ಲೆಗಳ ಅಲ್ಲಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯದ ಉಳಿದ ಹೆಚ್ಚಿನ ಭಾಗಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣ ಕಂಡಬರಲಿದೆ.
ಮಾಹಿತಿ: ಸಾಯಿಶೇಖರ್ ಕರಿಕಳ