ಸರ್ಕಾರಿ ಬಂಗಲೆ ತೊರೆಯಲು 24 ತಾಸುಗಳ ಗಡುವು: ಮುಫ್ತಿಗೆ ನೋಟೀಸ್ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸಹಿತ ಏಳು ಮಂದಿ ಮಾಜಿ ಶಾಸಕರಿಗೆ ಅನಂತ್‌ನಾಗ್ ಜಿಲ್ಲಾಧಿಕಾರಿ ಭಾನುವಾರ ನೋಟಿಸ್ ಜಾರಿ ಮಾಡಿದ್ದು, ಸರ್ಕಾರಿ ಬಂಗಲೆಯನ್ನು ಮುಂದಿನ 24 ತಾಸುಗಳ ಒಳಗಾಗಿ ತೆರವಿಗೊಳಿಸಲು ಸೂಚಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಖಾನಬಾಲ್‌ನ ಹೌಸಿಂಗ್ ಕಾಲೊನಿಯಲ್ಲಿ ಇರುವ ಬಂಗಲೆಯಲ್ಲಿ ಇವರೆಲ್ಲರೂ ವಾಸವಾಗಿದ್ದಾರೆ. ತಕ್ಷಣ ವಾಸಸ್ಥಾನ ಬದಲಾಯಿಸಬೇಕು, ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನೋಟೀಸ್‌ನಲ್ಲಿ ಎಚ್ಚರಿಸಲಾಗಿದೆ.

ಮೆಹಬೂಬಾ ಮುಫ್ತಿ, ಮಾಜಿ ಶಾಸಕರಾದ ಮೊಹಮ್ಮದ್ ಅಲ್ತಾಫ್ ವಾನಿ, ಅಬ್ದುಲ್ ರಹೀಂ ರಾಥರ್, ಅಬ್ದುಲ್ ಮಜೀದ್ ಭಟ್, ಅಲ್ತಾಫ್ ಶಾ, ಅಬ್ದುಲ್ ಕಬೀರ್ ಪಠಾಣ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಬಶೀರ್ ಶಾ ಮತ್ತು ಚೌಧರಿ ನಿಜಾಮುದ್ದೀನ್ ಅವರಿಗೆ ಈ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!