ಹೊಸದಿಗಂತ ಡಿಜಿಟಲ್ ಡೆಸ್ಕ್
ದೆಹಲಿಯ ರೋಹಿಣಿಯಲ್ಲಿ ಮೂವರು ಹುಡುಗಿಯರನ್ನು ಅಪಹರಿಸಿ ಅವರಿಗೆ ಮತ್ತು ಬೆರೆಸಿದ ಪಾನೀಯಗಳನ್ನು ನೀಡಿ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಗಸ್ಟ್ 6 ರಂದು ಮಸೀದಿ ಮಾತ್ನ ಬಾಲಕಿಯೊಬ್ಬಳು ಆಂಡ್ರ್ಯೂಸ್ ಗಂಜ್ನಲ್ಲಿರುವ ಶಾಲೆಗೆ ಹೋಗಿದ್ದಲ್ಲಿಂದ ಹಿಂತಿರುಗಿರಲಿಲ್ಲ. ಆತಂಕಗೊಂಡ ಪೋಷಕರು ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆಕೆ ಶಾಲೆಗೆ ಗೈರು ಹಾಜರಾಗಿದ್ದಳು.
ಶಾಲಾ ವ್ಯಾನ್ ಸಹ ಹತ್ತಿರಲಿಲ್ಲ. ದೂರುದಾರರ ಮಗಳು ಮಾತ್ರವಲ್ಲದೆ ಶಾಲೆಯ ಇತರ ಇಬ್ಬರು ಬಾಲಕಿಯರು ನಾಪತ್ತೆಯಾಗಿದ್ದರ ಬಗ್ಗೆ ಅಂದೇ ಪೊಲೀಸರಿಗೆ ದೂರು ಬಂದಿತ್ತು.
ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿದಾಗ ಕರೋಲ್ ಬಾಗ್ ಪ್ರದೇಶದಲ್ಲಿ ಅಪರಾಧಿಗಳ ಚಲನವಲನದ ಬಗ್ಗೆ ಮಾಹಿತಿ ದೊರೆತಿದೆ. ಕರೋಲ್ ಬಾಗ್ ನಲ್ಲಿ ಬಾಲಕಿಯರನ್ನು ಅಪಹರಿಸಿದ್ದ ಆರೋಪಿಗಳು ಅಲ್ಲಿಂದ ರೋಹಿಣಿ ಪ್ರದೇಶದ ಮನೆಗೆ ಕರೆದೊಯ್ದು ಅಲ್ಲಿ ಒತ್ತೆಯಾಳಾಗಿ ಇರಿಸಿಕೊಂದಿದ್ದರು. ಈ ವೇಳೆ ಒಬ್ಬಾತ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಹುಡುಗಿಯರು ತಮ್ಮ ಹೇಳಿಕೆಗಳಲ್ಲಿ ತಿಳಿಸಿದ್ದಾರೆ.
ಬಂಗಾಲಿ ಲಾಲ್ ಶರ್ಮಾ (45), ಸಂದೀಪ್ (36), ರುಕ್ಸಾನಾ (40) ಮತ್ತು ಜ್ಯೋತಿ (19) ಎಂಬ ಆರೋಪಿಗಳನ್ನು ಬಂಧಸಲಾಗಿದೆ. ಮೂವರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಪ್ರಕಾಶ್ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಹರಿಸಿದ್ದ ಹುಡುಗಿಯರನ್ನು ಚಂಡೀಗಢದಲ್ಲಿ ಮಾರಾಟ ಮಾಡಲು ಯೋಚಿಸಿದ್ದೆವು. ತಾನು ರುಕ್ಸಾನಾ ಜೊತೆಗೆ ಮಾನವ ಕಳ್ಳಸಾಗಣೆ ಸಿಂಡಿಕೇಟ್ ನಡೆಸುತ್ತಿದ್ದೆ ಎಂದು ಆರೋಪಿಗಳಲ್ಲಿ ಒಬ್ಬನಾದ ಶರ್ಮಾ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ.
ರುಕ್ಸಾನಾ ಮತ್ತು ಜ್ಯೋತಿ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಶರ್ಮಾ ಮತ್ತು ಸಂದೀಪ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ