ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಶಾಲೆಯೊಂದರಲ್ಲಿ ಒಂದೇ ಸಿರಿಂಜ್ನಲ್ಲಿ 30 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಈ ಕುರಿತು ದೂರು ಸ್ವೀಕರಿಸಿದ್ದು, ತನಿಖೆ ನಡೆಸಲಾಗುವುದು ಎಂದು ಸಿಎಂಎಚ್ಒ ಡಿಕೆ ಗೋಸ್ವಾಮಿ ತಿಳಿಸಿದ್ದಾರೆ. ತಪ್ಪು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಾಗರ ನಗರದ ಜೈನ್ ಪಬ್ಲಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕೋವಿಡ್ ಲಸಿಕೆ ಶಿಬಿರದ ವೇಳೆ ಈ ಘಟನೆ ನಡೆದಿದೆ. ಒಂದೇ ಸಿರಿಂಜ್ನಿಂದ 30 ವಿದ್ಯಾರ್ಥಿಗಳು ಲಸಿಕೆ ನೀಡುತ್ತಿರುವುದನ್ನು ನೋಡಿದ ಪೋಷಕರು ದೂರು ನೀಡಿದ್ದಾರೆ. ಕೋವಿಡ್ ಲಸಿಕೆ ಅಭಿಯಾನವನ್ನು ಆಯೋಜಿಸಿದ್ದ ಎಎನ್ಎಂ ಜಿತೇಂದ್ರ ರಾಯ್ ಮಾತನಾಡಿ, ಒಂದೇ ಸಿರಿಂಜ್ನಲ್ಲಿ ಲಸಿಕೆ ಹಾಕಲು ಇಲಾಖೆಯ ಮುಖ್ಯಸ್ಥರಿಂದ ಸೂಚನೆಗಳು ಬಂದಿದ್ದರಿಂದಲೇ ಹೀಗೆ ಮಾಡಿದ್ದೇವೆ. ಕೇವಲ ಒಂದು ಸಿರಿಂಜ್ ನೀಡಿ ವ್ಯಾಕ್ಸಿನ್ ನೀಡುವಂತೆ ಹೇಳಿದ್ರು. ಅವರು ಹೇಳಿದಂತೆಯೇ ನಾನು ಒಂದೇ ಸಿರಿಂಜ್ನಿಂದ 30 ವಿದ್ಯಾರ್ಥಿಗಳಿಗೆ ಲಸಿಕೆ ನೀಡಿದ್ದೇನೆ ಎಂದಿದ್ದಾರೆ.
ಈ ಘಟನೆ ಕುರಿತು ಸಾಗರ ಜಿಲ್ಲಾಡಳಿತ ಜಿತೇಂದ್ರ ವಿರುದ್ಧ ಎಫ್ಐಆರ್ ದಾಖಲಿಸಿದೆ. ಕೇಂದ್ರ ಸರ್ಕಾರದ ಒನ್ ನೀಡಲ್, ಒನ್ ಸಿರಿಂಜ್, ಒನ್ ಟೈಮ್ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಲಸಿಕೆ ಕಳುಹಿಸುವ ಉಸ್ತುವಾರಿ ವಹಿಸಿರುವ ಜಿಲ್ಲಾ ಲಸಿಕೆ ಅಧಿಕಾರಿ ಡಾ. ರಾಕೇಶ್ ರೋಷನ್ ತನಿಖೆಗೆ ಆದೇಶಿಸಿದ್ದಾರೆ.