ಹೊಸದಿಗಂತ ವರದಿ, ಶಿವಮೊಗ್ಗ:
ಬೈಕ್ ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಆಲ್ಕೊಳದಲ್ಲಿ ಬಂಧಿಸಲಾಗಿದೆ.
ತರೀಕೆರೆಯ ಸದ್ದಾಂ (30), ಶಕೀಲ್ ಮುನಾವರ್ (30) ಶಿವಮೊಗ್ಗ ಎಲ್.ಬಿ.ಎಸ್ ನಗರದ ಶ್ರೀಕಾಂತ್@ರೊನಾಲ್ಡೋ (24) ವರ್ಷದ ವೆಂಕಟೇಶ ನಗರದ ಸಂತೋಷ@ಹಾವಳಿ (26) ಇವರನ್ನು ದಸ್ತಗಿರಿ ಮಾಡಿ ಇವರಿಂದ, 45,000 ರೂ.ಮೌಲ್ಯದ 1,250 ಗ್ರಾಂ ತೂಕದ ಗಾಂಜಾ,1310 ರೂ. ನಗದು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಹೀರೋ ಸ್ಪ್ಲೆಂಡರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಆಲ್ಕೊಳ ಕೆರೆ ಏರಿ ಮೇಲೆ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.