ಮುಳುಗುತ್ತಿದ್ದ ಇಬ್ಬರ ರಕ್ಷಣೆಗೆ ಧಾವಿಸಿದ ಮೂವರು: ಐವರು ನೀರುಪಾಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೆರೆಯಲ್ಲಿ ಮುಳುಗಿ ಐವರು ಅಪ್ರಾಪ್ತ ಬಾಲಕರು ಮೃತಪಟ್ಟ ಘಟನೆ ಗುಜರಾತ್‌ ನ ಬೊಟಾಡ್ ಜಿಲ್ಲೆಯ ಕೃಷ್ಣ ಸಾಗರ ಕೆರೆಯಲ್ಲಿ ನಡೆದಿದೆ.

ಕೃಷ್ಣ ಸಾಗರ ಕೆರೆಯಲ್ಲಿ ಇಬ್ಬರು ಅಪ್ರಾಪ್ತರು ಈಜುತ್ತಿದ್ದರು. ಈ ವೇಳೆ ಬಾಲಕರಿಬ್ಬರು ಕೆರೆಯಲ್ಲಿ ಮುಳುಗುವುದನ್ನು ಕಂಡು ಅಲ್ಲೇ ಇದ್ದ ಮೂವರು ಬಾಲಕರು ರಕ್ಷಿಸಲು ಮುಂದಾಗಿದ್ದಾರೆ. ದುರಾದೃಷ್ಟವಶಾತ್ ರಕ್ಷಣೆ ಮಾಡಲು ತೆರಳಿದ್ದ ಮೂವರು ಕೂಡ, ಇಬ್ಬರು ಬಾಲಕರೊಂದಿಗೆ ನೀರುಪಾಲಾಗಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರಿಗೆ ಈ ಬಗ್ಗೆ ಶನಿವಾರ ಸಂಜೆ 4:30 ಕ್ಕೆ ವಿಷಯ ತಿಳಿದಿದ್ದು, ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರೂ ಯಾವ ಪ್ರಯೋಜನ ಕೂಡ ಆಗಿಲ್ಲ. ಮೃತ ಬಾಲಕರ ವಯಸ್ಸು 16-17 ಆಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬೊಟಾಡ್ ಎಸ್ಪಿ ಕಿಶೋರ್ ಬಲೋಲಿಯಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!