ಇ-ಸ್ವತ್ತು ಮಾಡಿಕೊಡಲು 5,000 ರೂ. ಲಂಚಕ್ಕೆ ಬೇಡಿಕೆ: ನಗರಸಭೆ ಸದಸ್ಯ ಲೋಕಾಯುಕ್ತ ಬಲೆಗೆ

ಹೊಸದಿಗಂತ ವರದಿ ಚಿತ್ರದುರ್ಗ:

ಇ-ಸ್ವತ್ತು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಗರಸಭೆ ಸದಸ್ಯ ಹಾಗೂ ಗುಮಾಸ್ತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹಿರಿಯೂರು ನಗರಸಭೆಯ ಪಕ್ಷೇತರ ಸದಸ್ಯ ಡಿ.ಸಣ್ಣಪ್ಪ ಹಾಗೂ ದ್ವಿತೀಯ ದರ್ಜೆ ಸಹಾಯಕ ರಮೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಪಿ.ನಟರಾಜ್ ಎಂಬುವರು ತಮ್ಮ ಮನೆಗೆ ಸಂಬಂಧಿಸಿದ ಇ-ಸ್ವತ್ತು ಪಡೆಯಲು ನಗರಸಭೆಗೆ ಅರ್ಜಿ ಸಲ್ಲಿಸಿದ್ದರು. ಇ-ಸ್ವತ್ತು ಮಾಡಿಕೊಡುವ ಸಂಬಂಧ ಸದಸ್ಯ ಡಿ.ಸಣ್ಣಪ್ಪ ಹಾಗೂ ದ್ವಿತೀಯ ದರ್ಜೆ ಸಹಾಯಕ ರಮೇಶ್ ಇಬ್ಬರು ಸೇರಿ 5,000 ರೂ. ನೀಡುವಂತೆ ನಟರಾಜ್ ಅವರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಲೋಕಾಯುಕ್ತ ಎಸ್‌ಪಿ ವಾಸುದೇವ್ ಹಾಗೂ ಡಿವೈಎಸ್‌ಪಿ ಮೃತ್ಯಂಜಯ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಆರೋಪಿಗಳು ಹಿರಿಯೂರು ನಗರಸಭೆಯ ಬಸ್‌ನಿಲ್ದಾಣದ ಬಳಿ ನಟರಾಜ್ ಅವರಿಂದ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆರೋಪಿಗಳನ್ನು ಬಂಧಿಸಿದ ಲೋಕಾಯುಕ್ತ ಅಧಿಕಾರಿಗಳು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!