PUC | ಶಿವಮೊಗ್ಗದಲ್ಲಿ ಶೇ.6ರಷ್ಟು ಫಲಿತಾಂಶ ಹೆಚ್ಚಳ: ಸಂತಸ ವ್ಯಕ್ತ ಪಡಿಸಿದ ಶಿಕ್ಷಣ ಸಚಿವ

ದಿಗಂತ ವರದಿ ಶಿವಮೊಗ್ಗ :

ಈ ಬಾರಿ ಪಿಯುಸಿಯಲ್ಲಿ ಶೇ.6 ರಷ್ಟು ಹೆಚ್ಚು ಫಲಿತಾಂಶ ಬಂದಿರುವುದು ಇಲಾಖೆಯ ಹೆಗ್ಗಳಿಕೆಯಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತಮಾಡಿ, ಈ ಸಾಧನೆಯಲ್ಲಿ ಉಪನ್ಯಾಸಕರು ಹಾಗೂ ಮಕ್ಕಳ‌ ಶ್ರಮ ಅತೀಮುಖ್ಯವಾಗಿದೆ. ನಾನು ಶಿಕ್ಷಣ ಇಲಾಖೆಯ ವ್ಯವಸ್ಥಾಪಕನಂತೆ ಕೆಲಸ ಮಾಡಿದ್ದೇನಷ್ಟೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಫಲಿತಾಂಶ ಹೆಚ್ಚು ಬಂದಿರುವುದು ಇನ್ನೊಂದು ಹಗ್ಗಳಿಕೆಯಾಗಿದೆ.ಈ ತಿಂಗಳ ಕೊನೆಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶವೂ ಬರಲಿದೆ. ಮಕ್ಕಳಿಗೆ ಆತ್ಮ ವಿಶ್ವಾಸ ತುಂಬಲು ಮೂರು ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಕೆಲವು ಮಕ್ಕಳು‌ ಕರೆ ಮಾಡಿ ಈ ಮೂರು ಪರೀಕ್ಷೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಹೀಗಾಗಿ ಒಳ್ಳೆಯ ಸ್ಪಂದನೆ ವ್ಯಕ್ತವಾಗಿದ್ದು, ಮೂರು ಪರೀಕ್ಷೆಗಳ ಬಗ್ಗೆ ಆಡಿಕೊಳ್ಳುವವರಿಗೆ ಇದು ಉತ್ತರವಾಗಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!