ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ವರನಟ ಡಾ.ರಾಜ್ಕುಮಾರ್ ಪುಣ್ಯಸ್ಮರಣೆ. ಈ ಹಿನ್ನಲೆಯಲ್ಲಿ ಸನ್ಮಾನ್ಯ ಸಿಎಂ ಸಿದ್ದರಾಮಯ್ಯ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರಾಜ್ ಕುಮಾರ್ ಅವರ ಸರಳತೆ, ದಯೆ ಮತ್ತು ಒಳ್ಳೆಯ ಮಾತುಗಳು ನಮಗೆ ತಕ್ಷಣ ನೆನಪಾಗುತ್ತವೆ. ನಾಯಕ, ಖಳನಾಯಕ, ಪೋಷಕ ಹೀಗೆ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದ ಅವರು ತಮ್ಮ ಅದ್ಭುತ ನಟನೆ ಮತ್ತು ಸುಮಧುರ ಕಂಠದಿಂದ ದಶಕಗಳ ಕಾಲ ಕನ್ನಡ ಚಿತ್ರರಂಗದ ಅಭಿಮಾನಿಗಳನ್ನು ರಂಜಿಸಿದವರು.
ಇಂದು ಅವರ ಪುಣ್ಯಸ್ಮರಣೆ, ನಾಡು ನುಡಿಯ ಬಗ್ಗೆ ಅವರಿಗಿದ್ದ ಅಭಿಮಾನ, ಬದ್ಧತೆಯನ್ನು ಈ ಸಂದರ್ಭದಲ್ಲಿ ಗೌರವದಿಂದ ಸ್ಮರಿಸಿ, ನಮಿಸುತ್ತೇನೆ ಎಂದು ಟೀಟ್ ಮಾಡಿದ್ದಾರೆ.
ಡಾ|| ರಾಜ್ಕುಮಾರ್ ಎಂದಾಕ್ಷಣ ತಟ್ಟನೆ ನೆನಪಾಗುವುದು ಅವರ ಸರಳತೆ, ಸಜ್ಜನಿಕೆ, ಅಕ್ಕರೆಯ ಮಾತುಗಳು.
ನಾಯಕ, ಖಳನಾಯಕ, ಪೋಷಕ ಹೀಗೆ ಪ್ರತಿಯೊಂದು ಪಾತ್ರಕ್ಕೂ ಜೀವತುಂಬುತ್ತಿದ್ದ ಅವರು ತಮ್ಮ ಅತ್ಯದ್ಭುತ ನಟನೆ, ಸುಮಧುರ ಕಂಠಸಿರಿಯ ಮೂಲಕ ಹಲವು ದಶಕಗಳ ಕಾಲ ಕನ್ನಡದ ಸಿನಿಪ್ರಿಯರನ್ನು ರಂಜಿಸಿದವರು.
ಪ್ರತಿ ಬಾರಿ ಭೇಟಿಯಾದಾಗಲೂ “ನಮ್ಮ… pic.twitter.com/JwlUMg4jYy
— Siddaramaiah (@siddaramaiah) April 12, 2024