ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಮವಾರ ಮುಂಜಾನೆ ಭೀಕರ ಅಪಘಾತ ಉಂಟಾಗಿದೆ. ರಾಜಸ್ಥಾನದ ಪಾಲಿ ಬಳಿ ಬಾಂದ್ರಾ ಟರ್ಮಿನಸ್-ಜೋಧ್ಪುರ ಸೂರ್ಯನಗರಿ ಎಕ್ಸ್ಪ್ರೆಸ್ ರೈಲಿನ ಎಂಟು ಬೋಗಿಗಳು ಹಳಿ ತಪ್ಪಿವೆ. ಇಂದು ಮುಂಜಾನೆ 3.27 ಕ್ಕೆ ಜೋಧ್ಪುರ ವಿಭಾಗದ ರಾಜ್ಕಿವಾಸ್-ಬೊಮದ್ರಾ ವಿಭಾಗದ ನಡುವೆ ರೈಲು ಹಳಿ ತಪ್ಪಿವೆ ಎಂದು ಸಿಪಿಆರ್ಒ, ನಾರ್ತ್ ವೆಸ್ಟರ್ನ್ ರೈಲ್ವೇ ಹೇಳಿದೆ.
CPRO ಪ್ರಕಾರ, ಯಾವುದೇ ಇದುವರೆಗೂ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಎಕ್ಸ್ಪ್ರೆಸ್ ರೈಲು ಹಳಿತಪ್ಪಿದ್ದರಿಂದ 11 ಬೋಗಿಗಳ ಮೇಲೆ ಪರಿಣಾಮ ಬೀರಿವೆ ಎಂದರು. ಸಿಕ್ಕಿಬಿದ್ದ ಪ್ರಯಾಣಿಕರಿಗೆ, ತಮ್ಮ ಗಮ್ಯಸ್ಥಾನಗಳನ್ನು ತಲುಪಲು ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ರೈಲ್ವೆ ಇಲಾಖೆಯಿಂದ ಅಪಘಾತ ಪರಿಹಾರ ರೈಲನ್ನು ಸಹ ಕಳುಹಿಸಲಾಗಿದೆ.
ಘಟನೆಯ ಬಗ್ಗೆ ಮಾತನಾಡಿದ ಪ್ರಯಾಣಿಕರೊಬ್ಬರು, “ಮಾರ್ವಾರ್ ಜಂಕ್ಷನ್ನಿಂದ ಹೊರಟ 5 ನಿಮಿಷಗಳಲ್ಲಿ ರೈಲಿನೊಳಗೆ ಕಂಪನದ ಶಬ್ದ ಕೇಳಿಸಿದ 2-3 ನಿಮಿಷಗಳ ನಂತರ ರೈಲು ನಿಂತಿತು. ನಾವು ಕೆಳಗೆ ಇಳಿದು ನೋಡಿದರೆ 8 ಸ್ಲೀಪರ್ ಕ್ಲಾಸ್ ಕೋಚ್ಗಳು ಟ್ರ್ಯಾಕ್ನಿಂದ ಹೊರಗಿರುವುದನ್ನು ನೋಡಿ ಶಾಕ್ ಆದೆವು. 15-20 ನಿಮಿಷಗಳಲ್ಲಿ ಆಂಬ್ಯುಲೆನ್ಸ್ಗಳು ಬಂದವು.
ಪ್ರಯಾಣಿಕರು ಮತ್ತು ಸಂಬಂಧಿತ ಕುಟುಂಬ ಸದಸ್ಯರಿಗೆ ಸಹಾಯವಾಣಿ ಸಂಖ್ಯೆಗಳನ್ನು ರೈಲ್ವೆ ಇಲಾಖೆ ಬಿಡುಗಡೆ ಮಾಡಿದೆ.
ಜೋಧ್ಪುರಕ್ಕಾಗಿ: 02912654979, 02912654993, 02912624125, 02912431646
ಪಾಲಿ ಮಾರ್ವಾರ್ ಗೆ: 02932250324
ಯಾವುದೇ ಮಾಹಿತಿಗಾಗಿ ಪ್ರಯಾಣಿಕರು ಮತ್ತು ಅವರ ಕುಟುಂಬಗಳು- 138 ಮತ್ತು 1072- ಅನ್ನು ಸಂಪರ್ಕಿಸಬಹುದು ಎಂದು ರೈಲ್ವೆ ತಿಳಿಸಿದೆ.