March 14, 2026
Saturday, March 14, 2026
spot_img

ಮಾಲೆಗಾಂವ್‌ ಸ್ಫೋಟ ಪ್ರಕರಣ । ಇಡೀ ನನ್ನ ಜೀವನವೇ ಹಾಳಾಯಿತು: ಕೋರ್ಟ್‌ನಲ್ಲಿ ಪ್ರಜ್ಞಾ ಸಿಂಗ್‌ ಭಾವುಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಮಾಲೆಗಾಂವ್‌ ಸ್ಫೋಟ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್‌ ಠಾಕೂರ್‌, ಕರ್ನಲ್‌ ಲೆಫ್ಟಿಂನೆಂಟ್‌ ಪ್ರಸಾದ್‌ ಪುರೋಹಿತ್‌ ಸೇರಿದಂತೆ ಒಟ್ಟು ಏಳು ಜನರು ಖುಲಾಸೆಗೊಂಡಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ಗುರುವಾರ ಪ್ರಕರಣದ ತೀರ್ಪು ಪ್ರಕಟಿಸಿದೆ.

ಪ್ರಜ್ಞಾ ಸಿಂಗ್‌ ಠಾಕೂರ್‌, ಕರ್ನಲ್‌ ಲೆಫ್ಟಿಂನೆಂಟ್‌ ಪ್ರಸಾದ್‌ ಪುರೋಹಿತ್‌ ಸೇರಿದಂತೆ ಒಟ್ಟು ಏಳು ಜನರನ್ನು ನಿರ್ದೋಷಿಗಳೆಂದು ಕೋರ್ಟ್‌ ಹೇಳಿದೆ. ಪ್ರಗ್ನಾ ಠಾಕೂರ್‌ ಕೋರ್ಟ್‌ನಲ್ಲಿ ಭಾವುಕರಾದರು. ಈ ಕುರಿತು ಅವರು ಮಾತನಾಡಿದ್ದಾರೆ.

ಈ ವೇಳೆ ನ್ಯಾಯಮೂರ್ತಿಗಳ ಮುಂದೆ ಪ್ರಜ್ಞಾ ಠಾಕೂರ್ ‘ಈ ಕೇಸಿನಿಂದ ನನ್ನ ಜೀವನವೇ ಹಾಳಾಯಿತು’ ಎಂದು ಹೇಳಿದ್ದಾರೆ.

ನಾನು ವರ್ಷಗಳ ಅವಮಾನವನ್ನು ಸಹಿಸಿಕೊಂಡಿದ್ದೇನೆ. ಎಷ್ಟೋ ಕಷ್ಟಗಳನ್ನು ಅನುಭವಿಸಿದೆ. ನಿರಪರಾಧಿಯಾಗಿದ್ದರೂ, ನನ್ನ ಮೇಲೆ ಅಪರಾಧಿ ಪ್ರಜ್ಞೆಯ ಕಳಂಕವನ್ನು ಹೇರಲಾಯಿತು ಎಂದು ಅವರು ಕಣ್ಣೀರು ಹಾಕಿದ್ದಾರೆ. ಇಂದು ಸತ್ಯ ಎಲ್ಲರೆದುರು ಅನಾವರಣವಾಗಿದೆ. ಇದು ಕೇಸರಿ ಧ್ವಜಕ್ಕೆ ಸಿಕ್ಕ ಜಯ, ಹಿಂದುತ್ವಕ್ಕೆ ಸಿಕ್ಕ ಜಯ ಎಂದು ಅವರು ಹೇಳಿದ್ದಾರೆ.

ಎನ್ಐಎ ನ್ಯಾಯಾಲಯದಲ್ಲಿ ನ್ಯಾಯಾಧೀಶರನ್ನುದ್ದೇಶಿಸಿ ಮಾತನಾಡಿದ ಪ್ರಜ್ಞಾ ಸಿಂಗ್‌ ಠಾಕೂರ್‌, ತನಿಖೆಗೆ ಕರೆಸಿಕೊಳ್ಳುವವರಿಗೆ ಅದರ ಹಿಂದೆ ಒಂದು ಆಧಾರವಿರಬೇಕು ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೆ. ಅವರು ನನ್ನನ್ನು ತನಿಖೆಗೆ ಕರೆದರು ಮತ್ತು ಬಂಧಿಸಿ ಚಿತ್ರಹಿಂಸೆ ನೀಡಿದರು. ಇದು ನನ್ನ ಇಡೀ ಜೀವನವನ್ನು ಹಾಳುಮಾಡಿತು. ನಾನು ಒಬ್ಬ ಋಷಿಯ ಜೀವನವನ್ನು ನಡೆಸುತ್ತಿದ್ದೆ, ಆದರೆ ನನ್ನ ಮೇಲೆ ಆರೋಪ ಹೊರಿಸಲಾಯಿತು, ಮತ್ತು ಯಾರೂ ನಮ್ಮ ಪಕ್ಕದಲ್ಲಿ ಸ್ವಇಚ್ಛೆಯಿಂದ ನಿಲ್ಲುತ್ತಿರಲಿಲ್ಲ. ನಾನು ಸನ್ಯಾಸಿಯಾಗಿರುವುದರಿಂದ ನಾನು ಜೀವಂತವಾಗಿದ್ದೇನೆ ಎಂದು ಹೇಳಿದ್ದಾರೆ. ಇಂದು, ಭಗವಂತ ಗೆದ್ದಿದ್ದಾರೆ, ಮತ್ತು ಹಿಂದುತ್ವ ಗೆದ್ದಿದೆ, ಮತ್ತು ದೇವರು ತಪ್ಪಿತಸ್ಥರನ್ನು ಶಿಕ್ಷಿಸುತ್ತಾನೆ ಎಂದು ಹೇಳಿದರು.

ವಿಶೇಷ ನ್ಯಾಯಾಧೀಶ ಎ.ಕೆ. ಲಹೋಟಿ ಇದ್ದ ನ್ಯಾಯಪೀಠ, ಕೇವಲ ಅನುಮಾನದ ಮೇರೆಗೆ ಪ್ರಕರಣವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿದರು ಮತ್ತು ಆರೋಪಿಗಳ ವಿರುದ್ಧದ ಆರೋಪ ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಸಮಾಜದ ವಿರುದ್ಧ ಗಂಭೀರ ಘಟನೆ ನಡೆದಿದೆ. ಆದರೆ ನ್ಯಾಯಾಲಯವು ಕೇವಲ ನೈತಿಕ ಆಧಾರದ ಮೇಲೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !