ಪಾಂಡಿಚೇರಿ ವಿರುದ್ಧ ಭರ್ಜರಿ ಜಯದೊಂದಿಗೆ ಪ್ರಿಕ್ವಾಟರ್‌ ಫೈನಲ್‌ ಗೆ ಲಗ್ಗೆ ಇಟ್ಟ ಕರ್ನಾಟಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಪಾಂಡಿಚೇರಿ ವಿರುದ್ಧ ಇನ್ನಿಂಗ್ಸ್‌ ಹಾಗೂ 20 ರನ್‌ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಕರ್ನಾಟಕ ತಂಡವು ರಣಜಿ ಟ್ರೋಫಿ ಪ್ರೀ ಕ್ವಾರ್ಟರ್​ ಫೈನಲ್‌ ಗೆ ಲಗ್ಗೆಇಟ್ಟಿದೆ. ಹಿಂದಿನ ಪಂದ್ಯದಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಕರ್ನಾಟಕ ಈ ಪಂದ್ಯದಲ್ಲಿ ಪಂಡಿಚೇರಿಯನ್ನು ಬಗ್ಗುಬಡಿದು ಹದಿನಾರರ ಘಟ್ಟಕ್ಕೆ ಪ್ರವೇಶಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಕರ್ನಾಟಕ ಪರ ಆರಂಭಿಕ ಬ್ಯಾಟ್ಸ್‌ ಮನ್‌ ದೇವದತ್ ಪಡಿಕ್ಕಲ್ (178), ನಾಯಕ ಮನೀಷ್ ಪಾಂಡೆ (107) ಭರ್ಜರಿ ಶತಕ ಸಿಡಿಸುವ ಮೂಲಕ ಮೊದಲ ಇನಿಂಗ್ಸ್​ನಲ್ಲಿ ರಾಜ್ಯವು 8 ವಿಕೆಟ್ ನಷ್ಟಕ್ಕೆ 453 ರನ್​ ಗಳ ಬೃಹತ್‌ ಮೊತ್ತವನ್ನು ಕಲೆಹಾಕಿ ಇನ್ನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತ್ತು.
ಸವಾಲು ಬೆನ್ನತ್ತಿದ ಪುದುಚೇರಿ ತಂಡವು ಕೃಷ್ಣಪ್ಪ ಗೌತಮ್ ಮಾರಕ ದಾಳಿಗೆ ಸಿಲುಕಿ ಮೊದಲ ಇನಿಂಗ್ಸ್​ನಲ್ಲಿ ಕೇವಲ 241 ರನ್​ಗಳಿಗೆ ಸರ್ವಪತನ ಕಂಡಿತ್ತು. ಭಾರೀ ಮುನ್ನಡೆ ಪಡೆದ ಕರ್ನಾಟಕ ಫಾಲೋಆನ್‌ ಹೇರಿತ್ತು. 2ನೇ ಇನಿಂಗ್ಸ್​ ಆರಂಭಿಸಿದ ಪುದುಚೇರಿ ಶ್ರೇಯಸ್ ಗೋಪಾಲ್ ಸ್ಪಿನ್ ದಾಳಿಗೆ ದಿಕ್ಕುತಪ್ಪಿತು. ದ್ವಿತೀಯ ಇನಿಂಗ್ಸ್​ನಲ್ಲಿ 192 ರನ್​ಗೆ ಕುಸಿದು ಇನಿಂಗ್ಸ್​ ಹಾಗೂ 20 ರನ್​ಗಳಿಂದ ಸೋಲೋಪ್ಪಿಕೊಂಡಿದೆ. ರಾಜ್ಯದ ಪರ ಕೆ.ಗೌತಮ್ ಮೊದಲ ಇನ್ನಿಂಗ್ಸ್‌ ನಲ್ಲಿ 5 ಹಾಗೂ ಶ್ರೇಯಸ್ ಗೋಪಾಲ್ ದ್ವಿತೀಯ ಇನಿಂಗ್ಸ್​​ನಲ್ಲಿ 5 ವಿಕೆಟ್ ಉರುಳಿಸಿದರು. ಭಾರೀ ಜಯದೊಂದಿಗೆ ಕರ್ನಾಟಕ ಗ್ರೂಪ್ ಸಿ ನಲ್ಲಿ ಅಗ್ರ ತಂಡವಾಗಿ ಪ್ರೀ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!