ಹೊಸ ದಿಗಂತ ವರದಿ , ವಿಜಯಪುರ:
ಪಠ್ಯಪುಸ್ತಕ ಕೇಸರೀಕರಣ ಪ್ರಶ್ನೇಯೆ ಇಲ್ಲ. ಸಮಾಜಕ್ಕೆ ಕೊಡುಗೆ ನೀಡಿದವರ ಪಠ್ಯ ಅಳವಡಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದರು.
ನಗರದಲ್ಲಿ ಪಠ್ಯಪುಸ್ತಕ ಕೇಸರೀಕರಣ ಆರೋಪ ಕುರಿತು ಪ್ರತಿಕ್ರಿಯಿಸಿ, ಪಠ್ಯಪುಸ್ತಕ ವಿಷಯಕ್ಕೆ ಕೇಸರಿಕರಣ ಮತ್ತೊಂದು, ಮಗದೊಂದು ಮಾಡೋ ಪ್ರಸ್ತಾವಣೆ ನಮ್ಮ ಮುಂದಿಲ್ಲ. ಯಾವ ಪಠ್ಯ ಅಳವಡಿಕೆ ಮಾಡಬೇಕು ಅನ್ನೋದನ್ನ ತಜ್ಞರು ನಿರ್ಧರಿಸಿದ್ದಾರೆ. ತಜ್ಞರ ಅಭಿಪ್ರಾಯದಂತೆ ಮಾಡಲಾಗಿದೆ. ಇಂಥದ್ದೆ ಪಠ್ಯ ಕೈಬಿಟ್ಟಿದ್ದಾರೆ ಅನ್ನೋದಕ್ಕೆ ಪುರಾವೆ ಬೇಕಲ್ಲ. ಸುಮ್ಮನೆ ಮಾತನಾಡೋದು ಅಲ್ಲ ಎಂದರು.
ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿರುವ ಕುರಿತು ಪ್ರತಿಕ್ರಿಯಿಸಿ, ಯಾರು ನಿರಾಶೆ ಆಗುವ ಅವಶ್ಯಕತೆ ಇಲ್ಲ. ವಿಜಯೇಂದ್ರಗೆ ಒಳ್ಳೆಯ ಸ್ಥಾನಮಾನ ಸಿಗುತ್ತದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಗೌರವವನ್ನು ಯಾರು ಕಡಿಮೆ ಮಾಡಲು ಆಗಲ್ಲ. ಯಡಿಯೂರಪ್ಪ ಶಕ್ತಿ ಕುಗ್ಗಿಸಲು ಯಾರಿಂದಲೂ ಆಗಲ್ಲ. ಅವರ ಸಾಮರ್ಥ್ಯ ರಾಜ್ಯಕ್ಕೆ ಗೊತ್ತಿದೆ. ಯಡಿಯೂರಪ್ಪ ತಂದೆಯ ಸಮಾನ ಆಗಿದ್ದಾರೆ ಎಂದರು.