ಹೊಸದಿಗಂತ ವರದಿ ಹುಬ್ಬಳ್ಳಿ:
ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಅಭಿನಯದ ವಿಂಡೋಸೀಟ್ ಸಿನಿಮಾ ರಾಜ್ಯಾದ್ಯಂತ ಅನೇಕ ಚಿತ್ರಮಂದಿರದಲ್ಲಿ ಜುಲೈ 1ರಂದು ಬಿಡುಗಡೆಗೆ ಸಿದ್ದವಾಗಿದೆ ಎಂದು ನಿರ್ದೇಶಕಿ ಶೀತಲ್ ಶೆಟ್ಟಿ ಹೇಳಿದರು. ಕಳೆದ ಮೂರು ವರ್ಷವಾದ ಬಳಿಕ ನಿರೂಪ್ ಭಂಡಾರಿಯವರ ಸಿನಿಮಾ ಬಿಡುಗಡೆಗೊಳ್ಳುತ್ತಿದೆ. ಒಂದು ಕೊಲೆಯ ಹಿಂದೆ ನಡೆಯುವ ಕಥೆಯನ್ನು ಒಳಗೊಂಡ ಮತ್ತು ಪ್ರೀತಿ ಆಧಾರಿತ ವಿಭಿನ್ನವಾದ ಸಿನಿಮಾ ಇದಾಗಿದೆ ಎಂದು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಾಯಕಿಯಾಗಿ ಸಂಜನಾ ಆನಂದ ಮತ್ತು ಅಮೃತ ಅಯ್ಯಂಗಾರ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ರವಿಶಂಕರ್, ಮಧುಸೂದನ್ ರಾವ್, ಲೇಖ ನಾಯ್ಡು, ಕಾಮಿಡಿ ಕಿಲಾಡಿ ಸೂರಜ್ ದೊಡ್ಡ ತಾರಾಬಳಗ ಹೊಂದಿದೆ. ನಿರ್ಮಾಪಕ ಮಂಜುನಾಥ ಗೌಡ, ಸಂಗೀತ ಅರ್ಜುನ್ ಜನ್ಯ, ವಿಘ್ನೇಶ್ ರಾಜ್, ಸಂಕಲನ ಪ್ರದೀಪ ರಾವ್, ಪತ್ರಿಕಾ ಸಂಪರ್ಕ ನಾಗೇಂದ್ರ ಒಳಗೊಂಡ ಚಿತ್ರತಂಡವಿದೆ ಎಂದರು.
ಹುಬ್ಬಳ್ಳಿಯರವಾದ ಲೇಖ ನಾಯ್ಡು ಅವರು ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಉತ್ತಮ ನಟನೆ ಮಾಡಿದ್ದಾರೆ. ಮುಂದಿನ ಹಲವಾರು ಸಿನಿಮಾಗಳಲ್ಲಿ ಅವರು ಕಾಣಿಸುತ್ತಾರೆ ಎಂದು ವಿಶ್ವಸ ವ್ಯಕ್ತಪಡಿಸಿದರು. ಸಿನಿಮಾದ ನಟ ನಿರೂಪ್ ಭಂಡಾರಿ, ನಟಿ ಅಮೃತ ಅಯ್ಯಂಗಾರ್ ಇದ್ದರು.