ಹೊಸದಿಗಂತ ಡಿಜಿಟಲ್ ಡೆಸ್ಕ್
ಈ ಹಿಂದೆ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನದಿಂದ ಹೊರಬಂದು ಬಿಜೆಪಿ ಸೇರಿ ಮುಖ್ಯಮಂತ್ರಿಯಾದವರು ನಿತೀಶ್ ಕುಮಾರ್. ಘಟಬಂಧನಕ್ಕೂ ಪೂರ್ವದಲ್ಲಿ ಅವರು ಬಿಜೆಪಿ ಜತೆಗಿದ್ದರು.
ಈ ಹಿಂದೆ ಮಹಾಘಟಬಂಧನದ ಸಖ್ಯ ತೊರೆಯುವಾಗ ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಹೇಳಿದ್ದ ಮಾತು- “ನಾವು ಮಣ್ಣು ಸೇರುವ ಸಮಯ ಬಂದರೂ ಮತ್ತೆ ಈ ಕೂಟಕ್ಕೆ (ಆರ್ಜೆಡಿ-ಕಾಂಗ್ರೆಸ್) ಮರಳಿಬರುವುದಿಲ್ಲ. ಇದೇನಿದ್ದರೂ ಮುಗಿದ ಅಧ್ಯಾಯ” ಎಂದಿದ್ದರು.
ಇದೀಗ ಅವರು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು ಮತ್ತೆ ಕಾಂಗ್ರೆಸ್-ಆರ್ಜೆಡಿ ಬಳಗ ಸೇರುವ ಸಾಧ್ಯತೆ ತೋರಿಸಿರುವ ಹೊತ್ತಿನಲ್ಲಿ ಅವರ ಹಳೆಮಾತುಗಳು ಟ್ವಿಟ್ಟರಿನಲ್ಲಿ ವೈರಲ್ ಆಗಿವೆ.
Anything is possible in love, war or politics. pic.twitter.com/xBD6nIbvRp
— ASHWANI MAHAJAN (@ashwani_mahajan) August 9, 2022