ಹೊಸದಿಗಂತ ವರದಿ, ಬಾಗಲಕೋಟೆ:
ಮುಖ್ಯ ಮಂತ್ರಿ ಬದಲಾವಣೆ ಚರ್ಚೆಯೇ ಅಪ್ರಸ್ತುತ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಅವರು ಹೇಳಿದರು.
ನವನಗರದ ಪತ್ರಿಕಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಈಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನೇತೃತ್ವದಲ್ಲಿ ಉತ್ತಮ ಆಡಳಿತ ರಾಜ್ಯದಲ್ಲಿ ನಡೆಯುತ್ತಿದೆ. ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಕೆಲಸವನ್ನು ಬೊಮ್ಮಾಯಿಯವರು ನಿಭಾಯಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಚಿಂನೆಗಳು ಸದ್ಯಕ್ಕೆ ಇಲ್ಲ ಎಂದರು.
75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ವನ್ನು ಅರ್ಥಪೂರ್ಣ ವಾಗಿಸಲು ಹಾಗೂ ಬೃಹತ್ ಮಧ್ಯಮ ಕೈಗಾರಿಕಾ ಸಚಿವ ಮುರಗೇಶ ನಿರಾಣಿಯವರ 57ನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ಬೀಳಗಿ ಬಿಜೆಪಿ ಯುವ ಮೋರ್ಚಾ ಹಾಗೂ ಎಂಆರ್ ಎನ್ ಫೌಂಡೇಶನ್ ದಿಂದ ಸೇವಾ ಅಮೃತ ಹೆಸರಿನಲ್ಲಿ 75 ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆ.18 ರಂದು 500 ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಆ.16 ರಂದು ಸವಳು ಜವಳು ಭೂಮಿಗೆ ಶಾಶ್ವತ ಪರಿಹಾರ ಕುರಿತು ತಜ್ಣರಿಂದ ಸಂವಾದ, ಉಚಿತ ಕೌಶಲ ಶಿಬಿರ, ಆ.18 ರಂದು ಬೃಹತ್ ಉದ್ಯೋಗ ಮೇಳ, ಆ.18 ರಂದು ತೆರಬಂಡಿ ಸ್ಪರ್ಧೆ, ಮಹಾವೃಕ್ಷ ಅಭಿಯಾನ. ಆ.15 ರಂದು ಉಚಿತ ಪಶು ಚಿಕಿತ್ಸಾ ಶಿಬಿರ ಹೀಗೆ 75 ಸೇವಾ ಕಾರ್ಯಕ್ರಮ ನಡೆಯಲಿವೆ ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ