ಹೊಸದಿಗಂತ ವರದಿ, ಕೊಡಗು:
ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಗ್ರಾಮೀಣ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ಜಿಲ್ಲೆಯ ದ್ವೀಪ್ ಮೇದಪ್ಪ 16 ವರ್ಷ ಒಳಗಿನ ವಿಭಾಗದ 800 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಪಡೆದಿದ್ದಾರೆ.
ದ್ವೀಪ್ ಮೇದಪ್ಪ ಅವರು ಹುದಿಕೇರಿ ಸಮೀಪದ ಕೋಣಗೇರಿ ಗ್ರಾಮದ ಕುಂಞಂಗಡ ತಮ್ಮಯ್ಯ -ಕಾವ್ಯ ಮುತ್ತಮ್ಮ(ತಾಮನೆ ಕಳ್ಳಿಚಂಡ -ಬಾಳೆಲೆ) ದಂಪತಿಯ ಪುತ್ರ ಮತ್ತು ಗೋಣಿಕೊಪ್ಪ ಕಾಲ್ಸ್ ವಿದ್ಯಾಸಂಸ್ಥೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ