ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳವಳ್ಳಿ ಕನಕನಹಳ್ಳಿಯಲ್ಲಿ ಮನೆಯೊಂದರ ಅಂಗಳದಲ್ಲಿ ಸಂಗ್ರಹಿಸಿಟ್ಟ ಸುಮಾರು 60 ಸಾವಿರ ರೂಪಾಯಿ ಮೌಲ್ಯದ ಎರಡು ಅಡಿಕೆ ಮೂಟೆಗಳನ್ನು ಯಾರೋ ಕಳುವು ಮಾಡಿದ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕನಕನಹಳ್ಳಿ ನಿವಾಸಿ ಮಹಾಬಲೇಶ್ವರ ನರಸಿಂಹ ಭಟ್ಟ ಎನ್ನುವವರು ತಮ್ಮ ಮನೆ ಅಂಗಳದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅಡಿಕೆ ಮೂಟೆಗಳನ್ನು ರಾಶಿ ಮಾಡಿಟ್ಟಿದ್ದು ಅದರಿಂದ 60 ಕೆ.ಜಿ ತೂಕದ ಎರಡು ಅಡಿಕೆ ಚೀಲಗಳನ್ನು ಕಳುವು ಮಾಡಿಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.
ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.