ಹೊಸದಿಗಂತ ವರದಿ ಬಾಗಲಕೋಟೆ:
ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಕೆರೆ ಬಳಿಯಿರುವ ಪತ್ರಾಸ ಸೆಡ್ ನಲ್ಲಿ ವಾಸವಾಗಿರುವ ತಂದೆಯನ್ನು ಮಗ ಕೊಲೆ ಮಾಡಿದ ಪ್ರಕರಣವು ಗುರುವಾರ ತಡರಾತ್ರಿ ಬನಹಟ್ಟಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಸ್ತಿ ವಿವಾದಕ್ಕೆ ನಡೆದ ಜಗಳದಲ್ಲಿ ಮಾಳಪ್ಪ ಹಳ್ಳೂರ(65) ಮೃತ ನಾಗಿದ್ದಾನೆ ಎಂದು ತಿಳಿದುಬಂದಿದೆ.
ತಂದೆಯನ್ನು ಕೊಲೆ ಮಾಡಿದ ತುಕ್ಕಪ್ಪ ಹಳ್ಳೂರ(24)ನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿದ್ದು, ಹೆಚ್ಚಿನ ತನಿಖೆ ಪ್ರಾರಂಭಿಸಿದ್ದಾರೆ.