ಹೊಸದಿಗಂತ ವರದಿ ಮೈಸೂರು:
ಯೋಗ ದಸರಾ ಉಪಸಮಿತಿಯಿಂದ ಯೋಗಚಾರಣ ಹಾಗೂ ದುರ್ಗಾ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಯೋಗದಲ್ಲಿ ನಿರತ ಯೋಗಪಟುಗಳು, ಯೋಗಾಸಕ್ತರು, ಸಾರ್ವಜನರಿಕರಿಂದ ಯೋಗಾಸನ ಮಾಡಲಾಯಿತು.
ಯೋಗದ ಜೊತೆ ದುರ್ಗಾ ನಮಸ್ಕಾರದ ಮೂಲಕ ದೇವಿಗೆ ನಮನ ಸಲ್ಲಿಸಲಾಯಿತು. ಯೋಗ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗಿಡಕ್ಕೆ ನೀರೆರೆಯುವ ಮೂಲಕ ಯೋಗಚಾರಣಕ್ಕೆ ಚಾಲನೆ ನೀಡಲಾಯಿತು. ಭದ್ರಕೋನಾಸನ, ವೀರಾಸನ, ವೀರಭದ್ರಾಸನ, ವಜ್ರಾಸನ, ಸಾಷ್ಟಾಂಗ ನಮಸ್ಕಾರ ಸೇರಿದಂತೆ ವಿವಿಧ ಆಸನನಗಳಲ್ಲಿ ಯೋಗ ಮಾಡಲಾಯಿತು.