ಹೊಸದಿಗಂತ ಡಿಜಿಟಲ್ ಡೆಸ್ಕ್
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್ಪುರದ ಶಹೀದ್ ಅಶ್ಫಾಕುಲಾ ಖಾನ್ ಝೂಲಾಜಿಕಲ್ ಪಾರ್ಕ್ ಮತ್ತು ಪಶುವೈದ್ಯ ಆಸ್ಪತ್ರೆಯಲ್ಲಿ ನಡೆದ ವನ್ಯಜೀವಿ ಆಚರಣೆ ಕಾರ್ಯಕ್ರಮದಲ್ಲಿ ಚಿರತೆ ಮರಿಗೆ ಹಾಲುಣಿಸಿದ್ದಾರೆ.
ಈ ಕುರಿತ ವಿಡಿಯೋ ವೈರಲ್ ಆಗಿದೆ.
ಈ ಹಿಂದೆವೂ ಸಿಎಂ ಯೋಗಿ ಅವರು ಗೋವುಗಳ ಮತ್ತು ಕರುಗಳ ವಿಶೇಷ ಕಾಳಜಿ ಹೊಂದಿದ್ದು ಅವುಗಳಿಗೆ ಮೇವು ನೀಡುವ, ಆಹಾರ ನೀಡುವ ವಿಡಿಯೋಗಳು ಬಂದಿದ್ದವು. ಈಗ ವೈದ್ಯಾಧಿಕಾರಿಗಳ ಸಮ್ಮುಖ ಚಿರತೆಯ ಮರಿಯನ್ನು ತಾವೇ ಖುದ್ದು ಕೈಯಲ್ಲಿ ಯಾವುದೇ ಅಂಜಿಕೆಯಿಲ್ಲದೆ ಹಿಡಿದು ಹಾಲು ಕುಡಿಸಿದ ವಿಡಿಯೋ ಭಾರಿ ವೈರಲ್ ಆಗಿದೆ. ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.