ನಡು ರಸ್ತೆಯಲ್ಲಿ ನಿಂತು ಹೋದ ಬಸ್:‌ ಪ್ರಯಾಣಿಕರೊಂದಿಗೆ ಸೇರಿ ಬಸ್‌ ತಳ್ಳಿದ ಕೇಂದ್ರ ಮಂತ್ರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಸ್ತೆಯಲ್ಲಿ ನಿಂತಿದ್ದ ಬಸ್ ಅನ್ನು ಪ್ರಯಾಣಿಕರೊಂದಿಗೆ ಸೇರಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ತಳ್ಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅನುರಾಗ್ ಠಾಕೂರ್ ಹಿಮಾಚಲ ಪ್ರದೇಶದ ಬಿಲಾಸ್‌ಪುರದ ರಸ್ತೆಯಲ್ಲಿ ಪ್ರಯಾಣಿಸುವ ವೇಳೆ  ಅವರ ಬೆಂಗಾವಲು ವಾಹನ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿತು. ಕಾರಿನಿಂದ ಕೆಳಗಿಳಿದು ಭಾರೀ ದಟ್ಟಣೆಗೆ ಕಾರಣವೇನು ಎಂದು ಪರಿಶೀಲಿಸಿದ ಅವರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ರಸ್ತೆಯಲ್ಲೇ ಸಿಲುಕಿದ್ದನ್ನು ಗಮನಿಸಿದರು. ಚಾಲಕ ಎಷ್ಟೇ ಪ್ರಯತ್ನಿಸಿದರೂ ಬಸ್ ಸ್ಟಾರ್ಟ್ ಆಗದ ಕಾರಣ ಎಲ್ಲರೂ ಬಸ್‌ ತಳ್ಳುವುದಕ್ಕೆ ಸಹಾಯ ಮಾಡಿದರು.

ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಸಚಿವ ಅನುರಾಗ್ ಠಾಕೂರ್ ಕೂಡ ಕೈ ಜೋಡಿ ಬಸ್ ಅನ್ನು ಹಿಂದಕ್ಕೆ ತಳ್ಳಿದರು. ದಟ್ಟಣೆಯಲ್ಲಿ ಸಿಲುಕಿದ ವಾಹನಗಳು ಮುಂದೆ ಸಾಗಿ ಟ್ರಾಫಿಕ್‌ ಕ್ಲಿಯರ್‌ ಆದ ಬಳಿ ಸಚಿವ ಅನುರಾಗ್ ಠಾಕೂರ್ ಕೂಡ ತೆರಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!