ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಶ್ವಾರೋಹಣ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ ಬಿಎಸ್ಎಫ್ ಯೋಧನೊಬ್ಬ ಕುದುರೆ ತುಳಿತದಿಂದ ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್ನ ತೇಕನ್ಪುರದ ಬಿಎಸ್ಎಫ್ ಅಕಾಡೆಮಿಯಲ್ಲಿ ಅಶ್ವಾರೋಹಣ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ ವೇಳೆ ಕುದುರೆ ಯೋಧನ ಹಣೆಗೆ ಬಲವಾಗಿ ಒದ್ದಿದೆ.
ಇದರಿಂದ ಬಿಎಸ್ಎಫ್ ಕಾನ್ಸ್ಟೇಬಲ್ ಜಿಡಿ ಥೋರಟ್ ಸುಧೀರ್ ಪಂಡರಿ ನಾಥ್ ಗಂಬೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.