ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಇಂದು ಅಫ್ತಾಬ್ನನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ.
ಅಫ್ತಾಬ್ ಶ್ರದ್ಧಾ ಕೊಲೆ ಬಗ್ಗೆ ಈಗಲೂ ಗೊಂದಲಮಯ ಹೇಳಿಕೆಗಳನ್ನು ನೀಡಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾನೆ. ಒಮ್ಮೆ ಶ್ರದ್ಧಾ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದೇನೆ, ಇನ್ನೊಮ್ಮೆ ದೇಹವನ್ನು 18 ತುಂಡು ಮಾಡಿ ಕತ್ತರಿಸಿದ್ದೇನೆ ಎನ್ನುವ ಮಾತುಗಳನ್ನು ಹೇಳುತ್ತಿದ್ದಾನೆ.
ಇಂದು ಅಫ್ತಾಬ್ ನಿಜರೂಪ ಬಯಲು ಮಾಡಲು ಪೊಲೀಸರು ಮಂಪರು ಪರೀಕ್ಷೆ ಮೊರೆ ಹೋಗಿದ್ದಾರೆ. ದೆಹಲಿಯ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮಂಪರು ಪರೀಕ್ಷೆ ನಡೆಯಲಿದೆ. ಪ್ರಕರಣ ಬೇಧಿಸಲು ಪಣ ತೊಟ್ಟಿರುವ ಪೊಲೀಸರು ಅಸಲಿ ಸತ್ಯ ಬಾಯ್ಬಿಡಿಸಲು 40-50 ಕಠಿಣ ಸವಾಲುಗಳನ್ನು ತಯಾರಿಸಿ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಮಂಪರು ಪರೀಕ್ಷೆ ವೇಳೆ ಅಫ್ತಾಬ್ ಇನ್ನಷ್ಟು ಮಾಹಿತಿ ಹೊರಹಾಕುವ ಸಾಧ್ಯತೆ ಇದೆ.