ಹೊಸದಿಗಂತ ವರದಿ, ಕೊಪ್ಪಳ:
ರಾಮನಬಂಟ ಹನುಮಂತನ ನಾಡು ಕೊಪ್ಪಳ. ಇದು ಶಕ್ತಿ ಸ್ಥಳವಾಗಿದೆ. ಕಾರ್ಯಕರ್ತರಿಗೆ ನಮ್ಮ ಕಾರ್ಯಾಲಯವೇ ದೇವ ಮಂದಿರ. ಇಂತಹ ದೇವ ಮಂದಿರದ ಉದ್ಘಾಟನೆ ಆಗುತ್ತಿರುವುದು ನಮಗೆಲ್ಲ ಸಂತಸದ ವಿಷಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಹೇಳಿದರು.
ಕೊಪ್ಪಳದ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಎಲ್ಲಾ ಹಳ್ಳಿ ಹಳ್ಳಿಗಳಲ್ಲು, ಜಿಲ್ಲಾ ಕೇಂದ್ರಗಳಲ್ಲಿ ಕಚೇರಿಗಳು ಇರಬೇಕು ಎನ್ನುವ ಆಶಯ ನಮ್ಮದಾಗಿತ್ತು. ಕೋವಿಡ್ ಕಾಲದಲ್ಲೆ ಹತ್ತು ಕಡೆ ಶಂಕುಸ್ಥಾಪನೆ ಮಾಡಲಾಗಿತ್ತು. ಇದೀಗ ಅವರ ಕಾಲದಲ್ಲೇ ಉದ್ಘಾಟನೆಗೊಳ್ಳುತ್ತಿವೆ. ಅದಕ್ಕಾಗಿ ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ ಎಂದರು.
ಇಂದು ಪಕ್ಷ ಜಗತ್ತಿನಲ್ಲೇ ಅತಿದೊಡ್ಡ ಪಕ್ಷವಾಗಿ ಬೆಳೆದಿದೆ. ಒಂದು ಕಾಲದಲ್ಲಿ ಕಾರ್ಯಕರ್ತರೇ ಇರಲಿಲ್ಲ. ಪಕ್ಷ ಸಂಘಟನೆಗಾಗಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿದ ಯಡಿಯೂರಪ್ಪ, ಅನಂತಕುಮಾರ್, ಜಗದೀಶ ಶೆಟ್ಟರ್ ಸೇರಿ ಅನೇಕರು ಪಕ್ಷ ಕಟ್ಟಿದರು. ಅದರ ಪರಿಣಾಮ ಇಂದು ಗ್ರಾಮ ಗ್ರಾಮದಲ್ಲಿ ಪಕ್ಷದ ಇದೆ, ಕಚೇರಿಗಳು ಉದ್ಘಾಟನೆಗೊಳ್ಳುತ್ತಿವೆ. ರಾಜ್ಯದ ಹತ್ತು ಜಿಲ್ಲೆಗ ನೂತನ ಕಟ್ಟಡಗಳನ್ನು ರಾಷ್ಟ್ರೀಯ ಅಧ್ಯಕ್ಷರು ಇಂದು ಉದ್ಘಾಟಿಸಲಾಗುತ್ತಿದೆ. ಇದು ನಮ್ಮ ಕಾರ್ಯಕರ್ತರಿಗೆ ಹೆಮ್ಮೆಯ ವಿಷಯವಾಗಿದೆ. ಬರುವ ದಿನಗಳಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ