ಹೊಸದಿಗಂತ ವರದಿ ಕಲಬುರಗಿ:
ಉತ್ತರಾದಿ ಮಠ ರುಕ್ಮಿಣಿ ವಿಠ್ಠಲ ಮಂದಿರದಲ್ಲಿ ವಿಶ್ವ ಮಧ್ವ ಮಹಾ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ಶ್ರೀ ಸತ್ಯಾತ್ಮತೀರ್ಥರು ದೀಪ ಬೆಳಗಿಸಿ ಚಾಲನೆ ನೀಡಿದರು.
ತದನಂತರ ಮಾತನಾಡಿ, ದಾನ ಗಳಲ್ಲಿ ಶ್ರೇಷ್ಠವಾದದ್ದು ರಕ್ತದಾನವಾಗಿದೆ. ಸಮಾಜಮುಖಿ ಕಾಯ೯ಗಳು ನಿರಂತರವಾಗಿ ಪರಿಷತ್ ವತಿಯಿಂದ ಜರುಗಲಿ ಎಂದು ಹೇಳಿದರು.
ಮಠಾಧಿಕಾರಿ ರಾಮಾಚಾರ್ಯ ಘಂಟಿ, ಪಂಡಿತ ಗೋಪಾಲ್ ಆಚಾರ್ಯ ಆಕಮಂಚಿ,ಅಧ್ಯಕ್ಷ ರಾಮಾಚಾರ್ಯ ಮೋಗರೆ,ಕಾರ್ಯದರ್ಶಿ ರವಿ ಲಾತೂರಕರ,ಗಿರಿಧರ್ ಕಂಧರಪಿ ಉಪಸ್ಥಿತರಿದ್ದರು.