ಆರ್‌ಎಸ್‌ಎಸ್ ಸ್ವಯಂಸೇವಕರಾದ ಬಡೆಕ್ಕಿಲ ಶಂಕರ್ ಭಟ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಸ್ವಯಂಸೇವಕರಾದ ಬಡೆಕ್ಕಿಲ ಶಂಕರ್ ಭಟ್(70) ಅವರು ಬೆಂಗಳೂರಿನ ತಮ್ಮ ಮಗಳ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬಾಲ್ಯದಿಂದಲೇ ಕೆದಿಲದಲ್ಲಿ ಆರ್‌ಎಸ್‌ಎಸ್ ಸಂಘದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ ಶಂಕರ್ ಭಟ್ ಅವರು ತಮ್ಮ ನಿವೃತ್ತಿ ನಂತರ ಜೀವನವನ್ನು ಸಂರ್ಪೂಣವಾಗಿ ಸಂಘದ ಕಾರ್ಯಗಳಿಗೆ ಮುಡಿಪಾಗಿಟ್ಟವರು.

ವಿಶೇಷವಾಗಿ ಪುತ್ತೂರಿನಲ್ಲಿ ಘೋಷ್ ಅಧ್ಯಯನಕ್ಕೆ ಒತ್ತುಕೊಟ್ಟು, ಹಲವಾರು ಸ್ವಯಂಸೇವಕರನ್ನು ಬೆಳೆಸಿದ್ದರು. ಜಿಲ್ಲೆಯ ವ್ಯವಸ್ಥಾಪಕರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ರಾಜೇಶ್ವರಿ, ಪುತ್ರಿ ದೀಪ್ತಿ ಭರತೇಶ, ಪುತ್ರ ಅನೀಷ ಮತ್ತು ಬಂಧು ಬಳಗದವರನ್ನು ಅಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!