ಹೊಸದಿಗಂತ ವರದಿ ಕಲಬುರಗಿ :
ಪಿಎಸ್ಐ ನೇಮಕಾತಿ ಪರೀಕ್ಷೆ ಆಕ್ರಮಕ್ಕೆ ಸಂಬಂಧಿಸಿದಂತೆ ಸಕಾ೯ರದ ಬೆಂಬಲವಿಲ್ಲದೇ ಯಾರು ಸಹ ಕಿಂಗ್ ಪಿನ್ ಗಳಾಗಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶನಿವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಗರಣಕ್ಕೆ ಸಕಾ೯ರದ ಸಂಪೂರ್ಣ ಬೆಂಬವಿದೆ ಎಂದು ಆರೋಪಿಸಿದ್ದಾರೆ.
ರಾಜ್ಯಾದ್ಯಂತ ನಾವು ಬಸ್ನಲ್ಲಿ ಜನರನ್ನು ಭೇಟಿಯಾಗಲು ಹೋಗುತ್ತಿದ್ದೇವೆ. ಆದರೆ ನಮ್ಮದು ಪ್ರಜೆಗಳ ಯಾತ್ರೆ ಎಂದು ತಿಳಿಸಿದ್ದಾರೆ.