ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಜ್ಜಲೆಗೆರೆ ಗ್ರಾಮದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಪ್ರಧಾನಿಯನ್ನು ಗೌರವಿಸಲಾಯಿತು. ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಸಿರು ಶಾಲು ಹೊದಿಸಿ, ಹೂವಿನ ಹಾರ ಹಾಕಿ ಸನ್ಮಾಸಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ಪ್ಯಾಕ್ ಮಾಡಿಸಿದ ಮಂಡ್ಯದ ಸಾವಯವ ಬೆಲ್ಲವನ್ನು ಸುಮಲತಾ ಪ್ರಧಾನಿಯವರಿಗೆ ಉಡುಗೊರೆಯಾಗಿ ನೀಡಿದರು.
ಜೊತೆಗೆ ಶ್ರೀಗಂಧದಲ್ಲಿ ರಚಿಸಿದ ಮೈಸೂರು ಗತವೈಭವವನ್ನು ಹೋಲುವ ಅಂಬಾರಿ ಹೊತ್ತ ಸಲಗದ ವಿಗ್ರಹವನ್ನು ಸಹ ಪ್ರಧಾನಿ ಗೌರವಪೂರ್ವಕವಾಗಿ ಕೊಡಲಾಯಿತು.