ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಆರ್ಆರ್ಆರ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಟಾಲಿವುಡ್ ನಟ ರಾಮ್ ಚರಣ್ (Ram Charan) ಅವರ ಜನಪ್ರಿಯತೆ ಹೆಚ್ಚಿದ್ದು, ಈಗ ಅವರು ಅಮೆರಿಕದಲ್ಲಿದ್ದಾರೆ. ಲಾಸ್ ಏಂಜಲಿಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆಯಲಿರುವ ಆಸ್ಕರ್ ಪ್ರಶಸ್ತಿ (Oscar Awards) ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಅವರು ಅಲ್ಲಿಗೆ ತೆರಳಿದ್ದಾರೆ.
ಇದರ ನಡುವೆ ರಾಮ್ ಚರಣ್ ಅವರ ವರ್ತನೆಯಲ್ಲಿ ಬದಲಾವಣೆ ಆಗಿದೆಯಾ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿದೆ . ಈ ಬಗ್ಗೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ (Kiara Advani) ಅವರು ಮಾತನಾಡಿದ್ದಾರೆ.
2019ರಲ್ಲಿ ತೆರೆಕಂಡ ತೆಲುಗಿನ ‘ವಿದೇಯ ವಿನಯ ರಾಮ’ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಅವರು ಜೊತೆಯಾಗಿ ನಟಿಸಿದ್ದರು. ಹಾಗಾಗಿ ಇಬ್ಬರ ನಡುವೆ ಫ್ರೆಂಡ್ಶಿಪ್ ಇದೆ. ಈಗ ಅವರಿಬ್ಬರು ಮತ್ತೊಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ತಾತ್ಕಾಲಿಕವಾಗಿ ‘ಆರ್ಸಿ 15’ ಎಂದು ಹೆಸರು ಇಡಲಾಗಿದೆ.
ಇತ್ತ ‘ಆರ್ಆರ್ಆರ್’ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಬಳಿಕ ‘ಆರ್ಸಿ 15’ ಸಿನಿಮಾದ ಕೆಲಸಗಳಲ್ಲಿ ರಾಮ್ ಚರಣ್ ತೊಡಗಿಕೊಂಡರು. ಈ ವೇಳೆ ಶೂಟಿಂಗ್ಗೆ ಬಂದ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ ಎಂದು ಕಿಯಾರಾ ಅಡ್ವಾಣಿ ಹೇಳಿದ್ದಾರೆ.
‘ರಾಮ್ ಚರಣ್ ಜೊತೆ ಕೆಲಸ ಮಾಡುವುದು ಯಾವಾಗಲೂ ಖುಷಿ ನೀಡುತ್ತದೆ. ಅವರು ತುಂಬ ಒಳ್ಳೆಯ ನಟ ಮತ್ತು ಡ್ಯಾನ್ಸರ್. ಆರ್ಆರ್ಆರ್ ಚಿತ್ರ ಸೂಪರ್ ಹಿಟ್ ಆದ ನಂತರ ನಾನು ಅವರನ್ನು ಭೇಟಿ ಆದೆ. ಈಗಲೂ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ತುಂಬ ವಿನಯವಂತಿಕೆ ಇರುವಂತಹ ವ್ಯಕ್ತಿ ಅವರು. ಆ ಕಾರಣದಿಂದಲೇ ಅವರು ಸ್ಟಾರ್ ಆಗಿದ್ದಾರೆ’ ಎಂದು ಕಿಯಾರಾ ಅಡ್ವಾಣಿ ಹೇಳಿದ್ದಾರೆ.