ರಮ್ಯಾರನ್ನು ಆಹ್ವಾನಿಸುವಷ್ಟು ಬಿಜೆಪಿ ಬರಗೆಟ್ಟಿಲ್ಲ: ಸಚಿವ ಆರ್.​ಅಶೋಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಬಿಜೆಪಿಯಿಂದ ನನಗೆ ಆಹ್ವಾನವಿತ್ತು ಎಂಬ ರಮ್ಯಾ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್​.ಅಶೋಕ್​​ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರಾಗಿರುವ ನಟಿ ರಮ್ಯಾ, ತಮ್ಮನ್ನು ಬಿಜೆಪಿಗೆ ಬರುವಂತೆ ಉನ್ನತ ನಾಯಕರೊಬ್ಬರು ಆಹ್ವಾನಿಸಿದ್ದರು. ಮಂತ್ರಿ ಮಾಡುವುದಾಗಿಯೂ ಹೇಳಿದ್ದರು. ರಮ್ಯಾ ಅವರ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಚರ್ಚೆಗೆ ಕಾರಣವಾಗಿದೆ. ರಮ್ಯಾ ಹೇಳಿಕೆಗೆ ಟಾಂಗ್‌ ನೀಡಿರುವ ಕಂದಾಯ ಸಚಿವ ಆರ್.ಅಶೋಕ್‌ ನಟಿ ರಮ್ಯಾರನ್ನು ನಮ್ಮ ಪಕ್ಷಕ್ಕೆ ಆಹ್ವಾನ ಮಾಡುವಷ್ಟು ಬಿಜೆಪಿ ಬರಗೆಟ್ಟಿಲ್ಲ ಎಂದಿದ್ದಾರೆ.

ಮಾಜಿ ಸಿಎಂ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರಿಗೇ ಟಿಕೆಟ್‌ ಕೊಟ್ಟಿಲ್ಲ. ಇನ್ನು ರಮ್ಯಾಗೆ ಯಾಕೆ ಕರೆದು ಸಚಿವ ಸ್ಥಾನ ಕೋಡೋಣ? ರಮ್ಯಾರನ್ನು ನಮ್ಮ ಪಕ್ಷಕ್ಕೆ ಬರಲು ಆಹ್ವಾನಿಸಿಲ್ಲ ಎ ಕಾಂಗ್ರೆಸ್​​ನಲ್ಲಿದ್ದವರು, ಲಾಭಕ್ಕಾಗಿ ಹಾಗೆ ಹೇಳಿರಬಹುದು. ಬಿಜೆಪಿಗೆ ರಮ್ಯಾರ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!