ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಾಗರವೇ ಹರಿದುಬಂದಿದ್ದು, ಎಲ್ಲೆಡೆ ಸಿದ್ದುಗೆ ಜೈಕಾರ ಮೊಳಗಿದೆ.
ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದು, ಕುರ್ಚಿಗಾಗಿ ನೂಕು ನುಗ್ಗಲು ನಡೆದಿದೆ. ಬಿಸಿಲನ್ನೂ ಲೆಕ್ಕಿಸದೆ ತಮ್ಮ ನೆಚ್ಚಿನ ನಾಯಕ ಪಟ್ಟಕ್ಕೆ ಏರುವುದನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.
ಎಲ್ಲೆಡೆ ಡಿಕೆಶಿಗೆ ಜೈ, ಸಿದ್ದರಾಮಯ್ಯಗೆ ಜೈ, ರಾಹುಲ್ ಗಾಂಧಿಗೆ ಕೈ, ಸೋನಿಯಾ ಗಾಂಧಿಗೆ ಜೈ, ಖರ್ಗೆಗೆ ಜೈ ಘೋಷಣೆಗಳೇ ಮೊಳಗುತ್ತಿವೆ.