ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿದ್ದು, ವಿಧಾನಸೌಧದ ಮೂರನೇ ಮಹಡಿಯಲ್ಲಿ ನೂತನ ಸಿಎಂ ನಾಮಫಲಕ ಅಳವಡಿಸಲಾಗಿದೆ.
ಇಷ್ಟು ದಿನ ಈ ಜಾಗದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೆಸರಿನ ಫಲಕ ಇತ್ತು, ಅದನ್ನು ತೆಗೆದು ಇದೀಗ ಸಿದ್ದರಾಮಯ್ಯ ಹೆಸರಿನ ಫಲಕವನ್ನು ಹಾಕಲಾಗಿದೆ.
ಪ್ರಮಾಣವಚನ ಕಾರ್ಯಕ್ರಮ ಮುಗಿದ ನಂತರ ವಿಧಾನಸೌಧಕ್ಕೆ ಭೇಟಿ ನೀಡಲಿದ್ದು, ಸಿಎಂ ಕೊಠಡಿಯಲ್ಲಿ ದೇವರ ಪೂಜೆಗೆ ಸಿದ್ಧತೆ ಮಾಡಲಾಗಿದೆ.