ಕಂಟೈನರ್‌ ರೂಪದಲ್ಲಿ ಬಂದ ಜವರಾಯ: 12ಮಂದಿ ದುರ್ಮರಣ, ಹೋಟೆಲ್‌ ರಕ್ತಸಿಕ್ತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂಬೈ-ಆಗ್ರಾ ಹೆದ್ದಾರಿಯ ಪಲಾಸ್ನರ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 12 ಜನರು ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬ್ರೇಕ್ ವೈಫಲ್ಯದಿಂದ ಕಂಟೇನರ್ ಅತಿವೇಗದಲ್ಲಿ ಹೋಟೆಲ್‌ಗೆ ಪ್ರವೇಶಿಸಿದ್ದೇ ಈ ದೊಡ್ಡ ಅಪಘಾತಕ್ಕೆ ಕಾರಣ. ಹೊಟೇಲ್‌ ಪೂರ್ತಿ ರಕ್ತ ಸಿಕ್ತ ಗಾಯಾಳುಗಳಿಂದ ತುಂಬಿದ್ದು, ಪೊಲೀಸ್ ತಂಡ ಸ್ಥಳಕ್ಕೆ ತಲುಪಿದ್ದಾರೆ.

ಅಪಘಾತ ನಡೆದ ಸ್ಥಳದ ಸಮೀಪದ ಗ್ರಾಮಗಳ ಜನರು ಜಮಾಯಿಸಿ ಅಗ್ನಿಶಾಮಕ ಸಿಬ್ಬಂದಿ ಬರುವವರೆಗೆ ಸ್ಥಳೀಯರ ಸಹಕಾರದೊಂದಿಗೆ ಗಾಯಾಳುಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಸಿದರು.

ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಕಂಟೈನರ್ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದು, ಬ್ರೇಕ್ ವೈಫಲ್ಯದಿಂದ ರಸ್ತೆ ಬದಿಯ ಹೋಟೆಲ್‌ಗೆ ಪ್ರವೇಶಿಸಿದೆ. ಹೋಟೆಲ್ ಹೊರಗೆ ನಿಂತಿದ್ದ ವಾಹನಗಳಿಗೂ ಕಂಟೈನರ್ ಡಿಕ್ಕಿ ಹೊಡೆದು ಅವೂ ಕೂಡ ನಜ್ಜುಗುಜ್ಜಾಗಿವೆ. ಈ ಮೊದಲು ಸಾವಿನ ಸಂಖ್ಯೆ ಐದು ಎಂದು ವರದಿಯಾಗಿತ್ತು, ಆದರೆ ಈಗ ಈ ಸಂಖ್ಯೆ ಡಜನ್ ತಲುಪಿದೆ. ಸ್ಥಳದಲ್ಲಿ ಪೊಲೀಸ್ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!