ನೆಲಮಂಗಲ ಬಳಿ 50 ಸಾವಿರ ರೂ ಹಣದ ಸಮೇತ ಡಸ್ಟರ್ ಕಾರು ಬೆಂಕಿಗಾಹುತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬ್ಯಾಟರಿ ಸರ್ಕ್ಯೂಟ್​ ಆಗಿ ಬೆಲೆಬಾಳುವ ಡಸ್ಟರ್ ಕಾರು ರಸ್ತೆಯಲ್ಲಿ ಹೊತ್ತಿ ಉರಿದ ಘಟನೆ ಸೋಲೂರು ಶ್ರೀರಾಮ ಫೈನಾನ್ಸ್ ಕಚೇರಿ ಬಳಿ ನಡೆದಿದೆ. ಕಿರಣ್ ಗೌಡ ಎಂಬುವರಿಗೆ ಸೇರಿದ ಡಸ್ಟರ್ ಕಾರು ಬೆಂಕಿಗಾಹುತಿಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ವ್ಯಾಪ್ತಿಯಲ್ಲಿವ ಶ್ರೀರಾಮ ಫೈನಾನ್ಸ್​ಗೆ ಹಣ ಕಟ್ಟಲು ಕಿರಣ್ ಗೌಡ ಬಂದಿದ್ದರು. ದುರದೃಷ್ಟವೆಂದರೆ 50 ಸಾವಿರ ರೂಪಾಯಿ ಹಣದ ಸಮೇತ ಡಸ್ಟರ್ ಕಾರು ಅಗ್ನಿಗಾಹುತಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!