ದಿನಭವಿಷ್ಯ| ಬದುಕಲ್ಲಿ ಸಂಘರ್ಷದ ಸಂಕೇತ ತೋರಿ ಬರುತ್ತಲಿದೆ, ಸಾಧ್ಯವಾದಷ್ಟು ತಪ್ಪಿಸಲು ಪ್ರಯತ್ನಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಮಾನಸಿಕ ಉದ್ವಿಗ್ನತೆ. ಹಲವಾರು ಒತ್ತಡ. ಈ ದಿನ ಸಂತೋಷದಿಂದ ಕಳೆಯಲು ಸಾಧ್ಯವಾಗದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಷಭ
ಅನವಶ್ಯವಾಗಿ ಮಾನಸಿಕ ಒತ್ತಡ ಅನುಭವಿಸುವಿರಿ. ಅದಕ್ಕೆ ಕಾರಣ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಗಣಿ ಸುವ ನಿಮ್ಮ ಸ್ವಭಾವ. ನಿರಾಳ ಮನಸ್ಸು ಅವಶ್ಯ.

ಮಿಥುನ
ದೇವರ ಅನುಗ್ರಹ ನಿಮಗಿದೆ. ಹಾಗಾಗಿ ಕಷ್ಟದ ಪರಿಸ್ಥಿತಿಯನ್ನೂ ಸುಲಭದಲ್ಲಿ ನಿಭಾಯಿಸುವಿರಿ. ಕೌಟುಂಬಿಕ ಸಹಕಾರ ದೊರಕುವುದು.

ಕಟಕ
ಸಂಬಂಧದಲ್ಲಿ ಮಹತ್ತರ ತಿರುವೊಂದು ಉಂಟಾದೀತು. ತಪ್ಪು ನಡೆ ಇಟ್ಟರೆ ಅದು ಪ್ರಮಾದ ಉಂಟು ಮಾಡೀತು.  ವಿವೇಕವಿರಲಿ.

ಸಿಂಹ
ಇತರರ ವ್ಯವಹಾರದಲ್ಲಿ ಮೂಗು ತೂರಿಸಲು ಹೋಗಬೇಡಿ.ಅದರಿಂದ ನಿಮಗೇ ತೊಂದರೆ ಉಂಟಾದೀತು. ಕುಟುಂಬ ಸದಸ್ಯರ ಜತೆ ದಿನ ಕಳೆಯಿರಿ.

ಕನ್ಯಾ
ಇತರರು ನಿಮ್ಮ ಕಾರ್ಯವನ್ನು ಗಮನಿಸುತ್ತಿರುತ್ತಾರೆ. ಹಾಗಾಗಿ ವಂಚನೆಯ ದಾರಿ ಹಿಡಿಯಬೇಡಿ. ಕೆಲಸವನ್ನು ಗಂಭೀರ ವಾಗಿ ನಿರ್ವಹಿಸಿ.

ತುಲಾ
ನಿಮ್ಮ ಬದುಕಲ್ಲಿ ಸಂಘರ್ಷದ ಸಂಕೇತ ತೋರಿ ಬರುತ್ತಲಿದೆ. ಅದನ್ನು ಸಾಧ್ಯವಾದಷ್ಟು ತಪ್ಪಿಸಲು ಪ್ರಯತ್ನ ಪಡಿ.  ಮಾನಸಿಕ ಕ್ಷೋಭೆ ಸಂಭವ.

ವೃಶ್ಚಿಕ
ಕೌಟುಂಬಿಕ ವಿಚಾರವೊಂದು ಚಿಂತೆಗೆ ಕಾರಣವಾಗುವುದು. ಅದಕ್ಕೆ ಸುಲಭ ಪರಿಹಾರವಿದೆ.  ಆದರೆ ನೀವು ಅದನ್ನು ಕಂಡುಕೊಳ್ಳುತ್ತಿಲ್ಲ.

ಧನು
ಆಪ್ತೇಷ್ಟರ ಸಂಗದಲ್ಲಿ ಸಂತೋಷ ಅನುಭವಿಸುವಿರಿ. ಕೆಲಸದ ಜಂಜಾಟವಿಲ್ಲ. ಇಂದಿನ ದಿನ ನಿಮಗೆ ಹಳೆ ನೆನಪು ಕೆದಕಲು ಸಹಕಾರಿ.

ಮಕರ
ಹಳೆಯ ನೆನಪಿನಲ್ಲೆ ಬದುಕು ಸಾಗಿಸಬೇಡಿ. ಕೆಲವು ವಿಷಯಗಳನ್ನು  ಮರೆತು ಮುಂದೆ ಹೋಗಬೇಕು. ಅತಿಯಾದ ಭಾವುಕತೆ ಒಳಿತಲ್ಲ.

ಕುಂಭ
ಉತ್ಸಾಹದಿಂದ ಕಾರ್ಯ ಎಸಗುವಿರಿ. ಎಲ್ಲವೂ ನೀವು ನಿರೀಕ್ಷಿಸಿದಂತೆ ನಡೆಯುವುದು. ಕೌಟುಂಬಿಕ ಸಹಕಾರ, ಸಮಾಧಾನ.  ವೃತ್ತಿಯಲ್ಲಿ ಉನ್ನತಿ.

ಮೀನ
ಉದ್ಯೋಗದಲ್ಲಿ ನಿಮಗೆ ಪೂರಕ ಬೆಳವಣಿಗೆ. ವವಹಾರದಲ್ಲಿ  ಇದ್ದ ಅಡಚಣೆ ನಿವಾರಣೆ ಆಗುವುದು. ಕೌಟುಂಬಿಕ ಬಿಕ್ಕಟ್ಟು ಪರಿಹಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!