ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಇಡಿ ವಿಚಾರಣೆಗೆ ಗೈರಾದ ದೆಹಲಿ ಸಿಎಂ ಕೇಜ್ರಿವಾಲ್ ಚುನಾವಣಾ ಪ್ರಚಾರದತ್ತ ತಮ್ಮ ಗಮನ ಹರಿಸಿದ್ದಾರೆ.
ಈಗಾಗಲೇ ಪಂಚ ರಾಜ್ಯ ಚುನಾವಣಾ ಕಾವು ಜೋರಾಗಿದ್ದು, ಪ್ರಚಾರದ ಭಾಗವಾಗಿ ಮಧ್ಯಪ್ರದೇಶದತ್ತ ದೆಹಲಿ ಸಿಎಂ ಹೆಜ್ಜೆಯಿಟ್ಟಿದ್ದಾರೆ. ನೋಟಿಸ್ ಹಿಂಪಡೆಯುವಂತೆ ಇಡಿಗೆ ಪತ್ರ ಬರೆದ ಕೇಜ್ರಿವಾಲ್, ತಮ್ಮ ನಿವಾಸದಿಂದ ವಿಮಾನ ನಿಲ್ದಾಣಕ್ಕೆ ತೆರಳಿದರು.
ಪಕ್ಷದ ಚುನಾವಣಾ ಪ್ರಚಾರದ ಭಾಗವಾಗಿ ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ ಅವರೊಂದಿಗೆ ರೋಡ್ ಶೋ ನಡೆಸಲಿದ್ದಾರೆ.
#WATCH | Delhi CM Arvind Kejriwal leaves from his residence for the airport.
He will hold a road show, along with Punjab CM Bhagwant Mann, in Singrauli, Madhya Pradesh as part of the party's election campaign there. pic.twitter.com/7Yt5QNJDup
— ANI (@ANI) November 2, 2023