Friday, December 8, 2023

Latest Posts

ಇಡಿ ವಿಚಾರಣೆಗೆ ಗೈರು, ಚುನಾವಣಾ ಪ್ರಚಾರಕ್ಕೆ ಕೇಜ್ರಿವಾಲ್ ಹಾಜರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಇಡಿ ವಿಚಾರಣೆಗೆ ಗೈರಾದ ದೆಹಲಿ ಸಿಎಂ ಕೇಜ್ರಿವಾಲ್‌ ಚುನಾವಣಾ ಪ್ರಚಾರದತ್ತ ತಮ್ಮ ಗಮನ ಹರಿಸಿದ್ದಾರೆ.

ಈಗಾಗಲೇ ಪಂಚ ರಾಜ್ಯ ಚುನಾವಣಾ ಕಾವು ಜೋರಾಗಿದ್ದು, ಪ್ರಚಾರದ ಭಾಗವಾಗಿ ಮಧ್ಯಪ್ರದೇಶದತ್ತ ದೆಹಲಿ ಸಿಎಂ ಹೆಜ್ಜೆಯಿಟ್ಟಿದ್ದಾರೆ. ನೋಟಿಸ್‌ ಹಿಂಪಡೆಯುವಂತೆ ಇಡಿಗೆ ಪತ್ರ ಬರೆದ ಕೇಜ್ರಿವಾಲ್‌, ತಮ್ಮ ನಿವಾಸದಿಂದ ವಿಮಾನ ನಿಲ್ದಾಣಕ್ಕೆ ತೆರಳಿದರು.

ಪಕ್ಷದ ಚುನಾವಣಾ ಪ್ರಚಾರದ ಭಾಗವಾಗಿ ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ ಅವರೊಂದಿಗೆ ರೋಡ್ ಶೋ ನಡೆಸಲಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!