February 16, 2026
Monday, February 16, 2026
spot_img

ಶಿವರಾತ್ರಿ ಜಾಗರಣೆಗೆ ಹೋಗಿದ್ದವರಿಗೆ ಶಾಕ್‌! ಮನೆಯಲ್ಲಿದ್ದ ಚಿನ್ನ-ಬೆಳ್ಳಿ ಎಲ್ಲವೂ ಗಾಯಬ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಹಾಶಿವರಾತ್ರಿ ಹಬ್ಬಕ್ಕೆ ಜಾಗರಣೆಗೆ ಹೊರಟಿದ್ದ ಕುಟುಂಬಕ್ಕೆ ಬಿಗ್‌ಶಾಕ್‌ ಕಾದಿತ್ತು!

ವಿಜಯಪುರದಲ್ಲಿ ಜಾಗರಣೆಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಮನೆಯಲ್ಲಿದ್ದ ಚಿನ್ನ ಬೆಳ್ಳಿ ಎಲ್ಲವನ್ನೂ ದೋಚಿ ಹೋಗಿದ್ದಾರೆ.

ಸೋಮಶೇಖರ್‌ ಗಣಿ ಎನ್ನುವವರ ಮನೆಯಲ್ಲಿದ್ದ 40 ಸಾವಿರ ನಗದು, 154 ಗ್ರಾಂ ಚಿನ್ನಾಭರಣ, 270 ಗ್ರಾಂ ಬೆಳ್ಳಿ ಆಭರಣ ಕದ್ದು ಖದೀಮರು ಪರಾರಿಯಾಗಿದ್ದಾರೆ.

ಮನೆಗೆ ಬೀಗ ಹಾಕಿ ಕುಟುಂಬ ಶಿವಗಿರಿಗೆ ತೆರಳಿತ್ತು. ಇನ್ನು ಇಂಡಿಯಾ-ಪಾಕಿಸ್ತಾನ್‌ ಮ್ಯಾಚ್‌ ಇದ್ದ ಕಾರಣ ಬೀದಿಯಲ್ಲಿ ಜನರೂ ಇರಲಿಲ್ಲ. ಹೀಗಾಗಿ ಕಳ್ಳರು ಕದ್ದು ಗಾಯಬ್‌ ಆಗಿದ್ದಾರೆ.

ಜಾಗರಣೆ ಮುಗಿಸಿ ಮನೆಗೆ ಬಂದ ಮಾಲೀಕರಿಗೆ ಶಾಕ್‌ ಆಗಿದ್ದು, ತಕ್ಷಣವೇ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸದ್ಯ ಪೊಲೀಸರ ಕಳ್ಳರ ಹುಡುಕಾಟದಲ್ಲಿ ತೊಡಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !