ಹೊಸದಿಗಂತ ವರದಿಧಾರವಾಡ:
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಸೋಮವಾರ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಿಲ್ ಕಲೆಕ್ಟರ್ ಬಸವರಾಜ ನಿಗದಿ, ಜಿಲ್ಲಾ ಕೇಂದ್ರ ಗ್ರಂಥಾಲಯದ ಎಸ್ಡಿಎ ಅನ್ನಪೂರ್ಣ ಎಸ್ ಸವದತಿ ಅಮಾನತುಗೊಂಡ ಅಧಿಕಾರಿಗಳು.
ಮತಪಟ್ಟಿ ಪರಿಷ್ಕರಿಸಲು ಸೂಚನೆ ನೀಡಿದರೂ, ಅಧಿಕಾರಿ ಬಸವರಾಜ ನಿಗದಿ (ಭಾಗಸಂಖ್ಯೆ 137), ಅನ್ನಪೂರ್ಣ ಸವದಿ (ಭಾಗ ಸಂಖ್ಯೆ 160) ಪ್ರೊಜನಿ ಮ್ಯಾಪಿಂಗ್ ಕಾರ್ಯ ಪ್ರಾರಂಬಿಸಿರಲಿಲ್ಲ. ಈ ಇಬ್ಬರು ಅಧಿಕಾರಿಗಳು ತಮಗೆ ವಹಿಸಿದ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬoದ ಕಾರಣ ಅಮಾನತುಗೊಳಿಸಿದ್ದಾಗಿ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.



