April 16, 2026
Thursday, April 16, 2026
spot_img

ಬೆಂಗಳೂರಿನಲ್ಲಿ ಎಟಿಎಂ ದರೋಡೆ ಮಾಡೋಕೆ ಹೋಗಿ ಸಿಕ್ಕಿಬಿದ್ದ ನೇಪಾಳಿ ಪ್ರಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಎಟಿಎಂ ದರೋಡೆಗೆ ವಿಫಲ ಯತ್ನ ನಡೆದಿದೆ. ನೇಪಾಳ ಮೂಲದ ರಾಜೇಂದ್ರ ಸಿಂಗ್‌ ಎನ್ನುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈತ ಹತ್ತು ದಿನಗಳ ಹಿಂದೆ ಇಂದಿರಾನಗರದ ಡಬಲ್‌ ರೋಡ್‌ ಬಳಿ ಇರುವ ಬ್ಯಾಂಕ್‌ ಆಫ್‌ ಬರೋಡಾದ ಎಟಿಎಂನ ಶಟರ್‌ ಎಳೆದುಕೊಂಡು ಕದಿಯೋಕೆ ಪ್ರಯತ್ನಿಸಿದ್ದ.

ಒಳಗಿದ್ದ ಎಟಿಎಂನ್ನು ಬಟ್ಟೆಯಿಂದ ಮುಚ್ಚಿದ್ದ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು ತಾನು ನಾಗಾರ್ಜುನ ಹೊಟೇಲ್‌ನ ಕಿಚನ್‌ನಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ.

ಎಟಿಎಂ ಒಡೆಯಲು ಬಾರದೇ ವಾಪಾಸ್‌ ಬಂದಿದ್ದಾನೆ. ಪೊಲೀಸರು ಈತನನ್ನು ಜೈಲಿಗೆ ಕಳಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !