ಜೀವನದಲ್ಲಿ ಎಲ್ಲರೂ ಕಷ್ಟಗಳನ್ನು ಎದುರಿಸುತ್ತಾರೆ. ಆದರೆ ಒಂದೇ ಪರಿಸ್ಥಿತಿಯಲ್ಲಿ ಕೆಲವರು ಕುಗ್ಗಿಬಿಡುತ್ತಾರೆ, ಇನ್ನೂ ಕೆಲವರು ಅದನ್ನೇ ಶಕ್ತಿಯಾಗಿ ಬಳಸಿಕೊಂಡು ಮುಂದೆ ಸಾಗುತ್ತಾರೆ. ಈ ವ್ಯತ್ಯಾಸಕ್ಕೆ ಕಾರಣ ಒಂದೇ ಮನಸ್ಸಿನ ಬಲ.
ಮನಸ್ಸು ಗಟ್ಟಿಯಾಗಿರುವ ವ್ಯಕ್ತಿ ಸಮಸ್ಯೆಗಳನ್ನು ತಪ್ಪಿಸಲು ಪ್ರಯತ್ನಿಸುವುದಿಲ್ಲ. ಅವುಗಳನ್ನು ಎದುರಿಸುವ ಧೈರ್ಯ ಹೊಂದಿರುತ್ತಾನೆ. ಕಷ್ಟಗಳು ಬಂದಾಗ “ಏಕೆ ನನಗೆ ಮಾತ್ರ?” ಎಂದು ಕೇಳುವುದಕ್ಕಿಂತ, “ಇದರಿಂದ ನಾನು ಏನು ಕಲಿಯಬಹುದು?” ಎಂದು ಯೋಚಿಸುತ್ತಾನೆ. ಇದೇ ಮನೋಭಾವ ಜೀವನದ ದಿಕ್ಕನ್ನು ನಿಧಾನವಾಗಿ ಬದಲಿಸುತ್ತದೆ.
ಮನಸ್ಸು ಗಟ್ಟಿಯಾಗಿದ್ರೆ ಇತರರ ಟೀಕೆಗಳು ನಮ್ಮನ್ನು ಸುಲಭವಾಗಿ ಕುಗ್ಗಿಸುವುದಿಲ್ಲ. ಹೋಲಿಕೆ, ಅನುಮಾನ, ಭಯ ಇವುಗಳು ನಿಧಾನವಾಗಿ ನಮ್ಮ ಮೇಲೆ ಇರುವ ಹಿಡಿತವನ್ನು ಕಳೆದುಕೊಳ್ಳುತ್ತವೆ. ನಾವು ನಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಲು ಆರಂಭಿಸುತ್ತೇವೆ.
ಇದನ್ನೂ ಓದಿ:
ಅದೇ ಸಮಯದಲ್ಲಿ ಮಾನಸಿಕ ಬಲ ನಮಗೆ ತಾಳ್ಮೆ ಕಲಿಸುತ್ತದೆ. ಎಲ್ಲವೂ ನಮ್ಮ ಯೋಜನೆಯಂತೆ ನಡೆಯದೇ ಇದ್ದರೂ ಸಹ, ನಾವು ತಾಳ್ಮೆಯಿಂದ ಮುಂದೆ ಸಾಗಲು ಸಾಧ್ಯವಾಗುತ್ತದೆ. ಇದೇ ಶಕ್ತಿ ಸಂಕಷ್ಟದ ಸಮಯದಲ್ಲಿ ನಮ್ಮನ್ನು ಗಟ್ಟಿಯಾಗಿ ನಿಲ್ಲಿಸುತ್ತದೆ.
ಜೀವನವನ್ನು ಸಂಪೂರ್ಣವಾಗಿ ಬದಲಿಸುವುದು ಪರಿಸ್ಥಿತಿಗಳಲ್ಲ. ಅವುಗಳನ್ನು ಎದುರಿಸುವ ನಮ್ಮ ಮನಸ್ಸು. ಮನಸ್ಸು ಗಟ್ಟಿಯಾಗಿದ್ರೆ ಸಮಸ್ಯೆಗಳು ಸಣ್ಣದಾಗುತ್ತವೆ, ಸವಾಲುಗಳು ಅವಕಾಶಗಳಾಗಿ ಕಾಣಿಸುತ್ತವೆ.
ನಿಜವಾದ ಶಕ್ತಿ ದೇಹದಲ್ಲಲ್ಲ ಮನಸ್ಸಿನಲ್ಲಿದೆ. ಮನಸ್ಸು ಗಟ್ಟಿಯಾಗಿದ್ರೆ ಜೀವನದ ದಾರಿಯೇ ಹೊಸದಾಗಿ ಕಾಣುತ್ತದೆ.



