ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿವೇಕ್ ಅಗ್ನಿಹೋತ್ರಿ ಹೊಸ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ ಆಪರೇಷನ್ ಸಿಂದೂರ ಬಗೆಗಿನ ಸಿನಿಮಾ ಇದಾಗಿದೆ.
ಈ ಸಿನಿಮಾಗೆ ಯಾರು ಹೀರೋ ಅನ್ನೋ ಕುತೂಹಲ ಎಲ್ಲ ಕಡೆ ಮನೆಮಾಡಿತ್ತು. ಆದರೆ ಈ ಸಿನಿಮಾ ಆಫರ್ ನಟ ವರುಣ್ ಧವನ್ಗೆ ಹೋಗಿದೆಯಂತೆ!
ಹೌದು, ದೇಶಭಕ್ತಿ ಸಿನಿಮಾಗಳ ಬಗ್ಗೆ ಜಾಸ್ತಿ ಒಲವು ತೋರುತ್ತಿರುವ ವರುಣ್ ಧವನ್ ಈ ಸಿನಿಮಾಗೆ ನಾಯಕನಾಗುವ ಸಾಧ್ಯತೆ ದಟ್ಟವಾಗಿದೆ. ಹಾಗೆಯೇ ವರುಣ್ ಧವನ್ ಹೀರೋ ಆದ್ರೆ ಸಿನಿಮಾ ಓಡೋದಿಲ್ಲ ಎಂದೂ ಜನ ಹೇಳ್ತಿದ್ದಾರೆ.
ವರುಣ್ ಧವನ್ ಇತ್ತೀಚೆಗೆ ತಮ್ಮ ಆಕ್ಟಿಂಗ್ನಿಂದಲೇ ಟ್ರೋಲ್ ಆಗ್ತಿದ್ದಾರೆ. ಇಂತವರಿಗೆ ಸೀರಿಯಸ್ ಸಿನಿಮಾ ಕೊಟ್ರೆ ಹೇಗಿರುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.



