ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪ್ಪನಿಗೆ ಔಷಧ ತರೋದಕ್ಕೆ ಹೋದ ಬಾಲಕನೊಬ್ಬ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಬೆಂಗಳೂರಿನ ಬಾಗಲೂರು-ಹೆಣ್ಣೂರು ರಸ್ತೆಯಲ್ಲಿ ಔಷಧ ತರಲು 16 ವರ್ಷದ ವರುಣ್ ಮೃತ ಬಾಲಕ. ಅಪ್ಪನಿಗೆ ಹುಷಾರಿಲ್ಲ ಎಂದು ವರುಣ್ ಹೊರಗೆ ಹೋಗಿದ್ದ, ಈ ವೇಳೆ ರಸ್ತೆಯಲ್ಲಿ ತಲೆ ತಿರುಗಿ ಬಿದ್ದಿದ್ದಾನೆ. ಬೀಳುತ್ತಿದ್ದಂತೆಯೇ ಏಕಾಏಕಿ ಬಂದ ಖಾಸಗಿ ಬಸ್ ಆತನ ಮೇಲೆ ಹರಿದು ಹೋಗಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಬಾಗಲೂರು ಹೆಣ್ಣೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ಕೆಲಸ ನಡೆಯುತ್ತಿದ್ದು, ಎರಡೂ ಭಾಗದ ವಾಹನಗಳು ಒಂದೇ ಕಡೆ ಸಾಗುತ್ತಿವೆ. ಇದರಿಂದ ವಾಹನದಟ್ಟಣೆ ಹೆಚ್ಚಾಗಿತ್ತು ಎನ್ನಲಾಗಿದೆ.
ಮಾತ್ರೆ ತರಲು ಹೋದ ಮಗ ಹೆಣವಾಗಿರುವುದನ್ನು ಕಂಡು ಪೋಷಕರು ಕಂಗಾಲಾಗಿದ್ದಾರೆ.



