ಜೀವನದಲ್ಲಿ ಎಲ್ಲವೂ ನಮ್ಮ ಲೆಕ್ಕದಂತೆ ನಡೆಯಬೇಕು ಅನ್ನೋ ಆಸೆ ಸಹಜ. ಏನು ಆಗಬೇಕು, ಹೇಗೆ ಆಗಬೇಕು, ಯಾರು ಹೇಗೆ ವರ್ತಿಸಬೇಕು ಎನ್ನುವವರೆಗೂ ನಾವು ಮನಸ್ಸಿನಲ್ಲೇ ಒಂದು ಯೋಜನೆ ಮಾಡಿಕೊಂಡಿರುತ್ತೇವೆ. ಆದರೆ ಜೀವನಕ್ಕೆ ತನ್ನದೇ ಆದ ದಾರಿ ಇರುತ್ತದೆ. ಅಲ್ಲಿಂದಲೇ ನಮ್ಮೊಳಗಿನ ಹೋರಾಟ ಶುರುವಾಗುತ್ತದೆ.
ಕೆಲವರು ಪ್ರತಿಯೊಂದು ಪರಿಸ್ಥಿತಿಯನ್ನು ತಮ್ಮ ನಿಯಂತ್ರಣದಲ್ಲಿ ಇಡಲು ಪ್ರಯತ್ನಿಸುತ್ತಾರೆ. ಸಣ್ಣ ಬದಲಾವಣೆ ಆದರೂ ಆತಂಕಪಡುತ್ತಾರೆ. ಯಾವುದಾದರೂ ತಮ್ಮ ನಿರೀಕ್ಷೆಯಂತೆ ನಡೆಯದಿದ್ದರೆ ನಿರಾಶೆಗೊಳಗಾಗುತ್ತಾರೆ. ನಿಧಾನವಾಗಿ ಈ ಅಭ್ಯಾಸವೇ ಮನಸ್ಸಿನ ಮೇಲೆ ಭಾರವಾಗಿ ಬದಲಾಗುತ್ತದೆ.
ಇದನ್ನೂ ಓದಿ:
ನಿಜವಾಗಿ ನೋಡಿದರೆ, ಜೀವನದಲ್ಲಿ ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವೇ ಇಲ್ಲ. ನಮ್ಮ ಪ್ರಯತ್ನ ನಮ್ಮ ಕೈಯಲ್ಲಿರಬಹುದು, ಆದರೆ ಫಲಿತಾಂಶ ಯಾವಾಗಲೂ ನಮ್ಮ ಕೈಯಲ್ಲಿರೋದಿಲ್ಲ. ಕೆಲವು ಸಂಬಂಧಗಳು, ಕೆಲವು ಸಂದರ್ಭಗಳು, ಕೆಲವು ತಿರುವುಗಳು ನಮ್ಮ ಇಚ್ಛೆ ಕೇಳಿ ಬರುವುದಿಲ್ಲ. ಅದನ್ನು ಒಪ್ಪಿಕೊಳ್ಳುವುದು ಕೆಲವೊಮ್ಮೆ ಸೋಲು ಅಲ್ಲ, ಅದು ಪ್ರಬುದ್ಧತೆ.
ವಿಚಿತ್ರ ಅಂದ್ರೆ, ಎಲ್ಲವನ್ನೂ ಹಿಡಿದುಕೊಳ್ಳಲು ಪ್ರಯತ್ನಿಸಿದಷ್ಟು ಮನಸ್ಸು ಹೆಚ್ಚು ದಣಿಯುತ್ತದೆ. ಆದರೆ ಕೆಲವು ವಿಷಯಗಳನ್ನು ಜೀವನದ ಕೈಗೆ ಬಿಟ್ಟಾಗ, ಒಳಗೆ ಒಂದು ರೀತಿಯ ನೆಮ್ಮದಿ ಸಿಗುತ್ತದೆ. ಯಾಕೆಂದರೆ ಪ್ರತಿಯೊಂದು ಸಮಸ್ಯೆಗೆ ಪರಿಹಾರ ಹುಡುಕುವುದಕ್ಕಿಂತ, ಕೆಲವು ವಿಷಯಗಳನ್ನು ಸ್ವೀಕರಿಸುವುದು ಸುಲಭ.
ಕೊನೆಗೆ ಜೀವನ ನಮಗೆ ಕಲಿಸುವ ದೊಡ್ಡ ಪಾಠ ಒಂದೇ…ಎಲ್ಲವನ್ನೂ ನಿಯಂತ್ರಿಸುವುದರಲ್ಲಿ ಅಲ್ಲ, ಕೆಲವು ವಿಷಯಗಳನ್ನು ಬಿಟ್ಟುಬಿಡುವುದರಲ್ಲಿ ಕೂಡ ಒಂದು ಸ್ವಾತಂತ್ರ್ಯ ಅಡಗಿದೆ.



