June 30, 2026
Tuesday, June 30, 2026
spot_img

ಸಹಕಾರ ಬ್ಯಾಂಕ್ ಗೋಲ್ಮಾಲ್ ಪ್ರಕರಣ: ಡೆತ್‌ನೋಟ್ ಬರೆದು ಆತ್ಮಹ*ತ್ಯೆಗೆ ಶರಣಾದ ಅಧ್ಯಕ್ಷ

ಹೊಸದಿಗಂತ ವರದಿ ಯಾದಗಿರಿ:

ಹೇಮರೆಡ್ಡಿ ಮಲ್ಲಮ್ಮ ಸಹಕಾರ ಬ್ಯಾಂಕ್ ನಲ್ಲಿ ಕೋಟ್ಯಾಂತರ ರೂ. ಗೋಲ್ಮಾಲ್ ವಿಚಾರ ಆರೋಪ ಎದುರಿಸುತ್ತಿದ್ದ ಬ್ಯಾಂಕ್ ಅಧ್ಯಕ್ಷ ಎಂಟು ಪುಟಗಳ ಡೆತ್‌ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ನಡೆದಿದೆ.

ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡವರು. ಬ್ಯಾಂಕ್ ನ 16 ಕೋಟಿ ವ್ಯವಹಾರದಲ್ಲಿ 13 ಕೋಟಿಯಷ್ಟು ಗೋಲ್ಮಾಲ್ ಮಾಡಲಾಗಿತ್ತು. ನಮ್ಮ ಹಣ ನಮಗೆ ನೀಡಿ ಅಂತ ಠೇವಣಿದಾರರು ಬ್ಯಾಂಕ್ ಮುಂದೆ ಧರಣಿ ನಡೆಸುತ್ತಿದ್ದರು.

ಇದನ್ನೂ ಓದಿ:

ಧರಣಿ ಆರಂಭವಾಗುತ್ತಿದ್ದ ಹಾಗೆ ಊರು ಬಿಟ್ಟು ಹೋಗಿದ್ದ ಬಸನಗೌಡ, ನಿನ್ನೆ ರಾತ್ರಿ ಮನೆಗೆ ವಾಪಸ್ ಮರಳಿದ್ದರು. ಶಹಾಪುರದ ತಮ್ಮ ನಿವಾಸದಲ್ಲಿ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಅದನ್ನು ಸಮಾಜಿಕ‌ ಜಾಲತಾಣಗಳಲ್ಲಿ ಹರಿಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದಕ್ಕೂ ಮುನ್ನ ಬಾನಗೌಡ, ಬ್ಯಾಂಕ್ ನ ಸಿಇಒ,ಸಹಾಯಕ ವ್ಯವಸ್ಥಾಪಕ ಹಾಗೂ ಪಿಗ್ಮಿದಾರನ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದರು. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !