July 28, 2026
Tuesday, July 28, 2026
spot_img

ದೇಶದ್ರೋಹಿಗಳ ವಿರುದ್ಧ ನಿರ್ದಾಕ್ಷಿಣ್ಯ ತನಿಖೆ ನಡೆಸಿ: ಶಾಸಕ ಬಸವನಗೌಡ ಪಾಟೀಲ ಯತ್ನಾಳ್

ಹೊಸದಿಗಂತ ವರದಿ ವಿಜಯಪುರ:

ಭಾರತ ದೇಶದಲ್ಲಿದ್ದು ಪಾಕಿಸ್ತಾನ ಝಿಂದಾಬಾದ್ ಅನ್ನೊದು ತಪ್ಪು. ನಮ್ಮಲ್ಲಿ ದೇಶದ್ರೋಹಿಗಳಿದ್ದಾರೆ. ಅಂತವರ ವಿರುದ್ಧ ತನಿಖೆ ಆಗಬೇಕು ಎಂದು ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ಹೇಳಿದ್ದು ದೊಡ್ಡ ಹೇಳಿಕೆ ಮಾಡಿರುವುದು ಸರಿಯಲ್ಲ ಎಂದರು.

ಲವ್ ಜಿಹಾದ್, ಹಿಂದೂ ದೇವರ ಮೂರ್ತಿಗಳನ್ನು ಒಡೆದು ಹಾಕುತ್ತಾರೆ. ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಕಿಡಿಕಾರಿದರು.

ಕೆಪಿಎಸ್‌ಸಿಯಲ್ಲಿ ದೊಡ್ಡ ಅವ್ಯವಹಾರ ಆಗಿದ್ದು, ಕೆಪಿಎಸ್‌ಸಿಯಲ್ಲಿನ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಂಡು, ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !